ಕೇಂದ್ರವನ್ನು ನಿಂದಿಸೋದು ಬಿಟ್ಟು ವಿಶ್ವಾಸಕ್ಕೆ ಪಡೆಯಿರಿ-ಕುಮಾರಸ್ವಾಮಿ ಆಕ್ರೋಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಘೋಷಿಸಿರುವ ಯೋಜನೆಗಳನ್ನು ಜಾರಿ ಮಾಡದೆ ರಾಜ್ಯ ಸರ್ಕಾರ ಕೇಂದ್ರದತ್ತ ಬೊಟ್ಟು ಮಾಡುತ್ತಿದೆ, ಮೊದಲು ಇದನ್ನು ಬಿಟ್ಟು ಕೇಂದ್ರ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕಿದೆ ಎಂಬ ಮಾತನ್ನು ಹೇಳಿದರು.

ರಾಜ್ಯ-ಕೇಂದ್ರ ಸರ್ಕಾರದ ನಡುವೆ ಒಳ್ಳೆಯ ಬಾಂಧವ್ಯ ಇರಬೇಕು. ಸಿಕ್ಕ ಸಿಕ್ಕಲ್ಲೆಲ್ಲಾ ಒಬ್ಬರಿಗೊಬ್ಬರು ನಿಂದಿಸಿದರೆ ನಿಮ್ಮ ನೆರವಿಗೆ ಯಾರು ಬರುತ್ತಾರೆ ಎಂದು ಪ್ರಶ್ನಿಸಿದರು. ನಿಂದನೆ ಬಿಟ್ಟು ಮನವೊಲಿಕೆ ಕೆಲಸ ಆಗಬೇಕು. ಕೇಂದ್ರವನ್ನ ವಿಶ್ವಾಸಕ್ಕೆ ಪಡೆದು ಬಜೆಟ್ ಯೋಜನೆಗಳನ್ನು ಅನುಷ್ಠಾನಗೊಳಿಸಿ ಎಂದು ಸಲಹೆ  ನೀಡಿದರು.

ಅಲ್ಲದೆ, ಈಗ ಬಜೆಟ್​ನಲ್ಲಿ 1.75 ಸಾವಿರ ಕೋಟಿ ಹಣ ನೀಡದೇ ಕೆಲವು ಕಾರ್ಯಕ್ರ ಘೋಷಿಸಿದ್ದಾರೆ ಎಂದು ಹೆಚ್​ಡಿಕೆ ಟೀಕಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!