ಹೊಲದಲ್ಲಿ ಬಿತ್ತನೆ ಮಾಡುವ ವೇಳೆ ಕುಸಿದು ಬಿದ್ದು ರೈತ ಸಾವು

ಹೊಸದಿಗಂತ ವರದಿ, ಅಂಕೋಲಾ:

ಹೊಲದಲ್ಲಿ ಬಿತ್ತನೆ ಮಾಡುತ್ತಿದ್ದ ರೈತ ಕುಸಿದು ಬಿದ್ದು ಮೃತ ಘಟನೆ ತಾಲೂಕಿನ ಬೇಳಾ ಬಂದರನಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದೆ.

ಬೇಳಾ ಬಂದರ್ ನಿವಾಸಿ ರಾಜು ಗಾಂವಕರ್ (55) ಮೃತ ದುರ್ದೈವಿಯಾಗಿದ್ದು ಈತ ತನಗೆ ಸಂಬಂಧಿಸಿದ ಕೃಷಿ ಭೂಮಿಯಲ್ಲಿ ಬೀಜ ಬಿತ್ತುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕುಸಿದು ಬಿದ್ದಿದ್ದು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ವ್ಯಕ್ತಿ ಮೃತ ಪಟ್ಟಿರುವುದಾಗಿ ವೈದ್ಯರು ದೃಡಿಕರಿಸಿರುವುದಾಗಿ ತಿಳಿದು ಬಂದಿದೆ.

ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!