ಬಸ್ ನಿಲ್ಲಿಸದಿದ್ದಕ್ಕೆ ಕಲ್ಲು ಎಸೆತ: ಗಾಜು ಪುಡಿ ಪುಡಿ

ಹೊಸದಿಗಂತ ವರದಿ, ಕಲಬುರಗಿ:

ಜಿಲ್ಲೆಯ ಕಮಲಾಪುರ ತಾಲೂಕಿನ ಗುತ್ತಿ ತಾಂಡದ ಬಳಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಮೇಲೆ ಕಲ್ಲು ಎಸೆಯಾಲಾಗಿದ್ದು, ಬಸ್‌ನ ಹಿಂಬದಿ ಗಾಜು ಪುಡಿ ಪುಡಿಯಾಗಿದೆ.

ಬಸವಕಲ್ಯಾಣದಿಂದ ಕಲಬುರಗಿ ನಗರಕ್ಕೆ ಆಗಮಿಸುತ್ತಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್, ಫುಲ್ ಆಗಿದ್ದರಿಂದ ಗುತ್ತಿ ತಾಂಡಾ ಬಳಿ ಬಸ್ ನಿಲ್ಲಿಸದೇ ಚಾಲಕ ಹಾಗೆ ಹೋಗಿದ್ದಾನೆ.
ಇದರಿಂದ ಕೋಪಗೊಂಡ ಕೆಲವರು ಬಸ್ ಮೇಲೆ ಕಲ್ಲು‌ ಎಸೆದಿದ್ದಾರೆ. ಕಮಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!