ಹೊಸದಿಗಂತ ಡಿಜಿಟಲ್ ಡೆಸ್ಕ್:
ಸದಾ ಸೃಜನಶೀಲನಾಗಿರುವ ವ್ಯಕ್ತಿಗೆ ಬೌದ್ಧಿಕ ಚಿಂತನೆ ನಿರಂತರವಾಗಿರುತ್ತದೆ, ಅವರಿಗೆ ನಿತ್ಯವೂ ನೂತನ ಅವಕಾಶಗಳು ದೊರೆಯುತ್ತವೆ, ಗೃಹ ಸಚಿವರಾದ ಡಾ|ಜಿ. ಪರಮೇಶ್ವರ ಅವರಲ್ಲಿ ಈ ಗುಣಗಳಿವೆ ಎಂದು ಅಧ್ಯಾತ್ಮಿಕ ಗುರು, ಅಂತಾರಾಷ್ಟ್ರೀಯ ವಾಸ್ತು ತಜ್ಞ, ವೈಜ್ಞಾನಿಕ ಜ್ಯೋತಿಷಿ, ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದ್ದಾರೆ.
ಜಿ. ಪರಮೇಶ್ವರ ದಂಪತಿಗಳಿಗೆ ವಿಶೇಷವಾಗಿ ಸನ್ಮಾನಿಸಿ ಸ್ವಾಮೀಜಿಗಳು ಮಾತನಾಡಿದ್ದು, ಪರಮೇಶ್ವರ ಅವರು ಶಕ್ತಿವಂತರು, ಸಾಧಕರು, ಬದುಕಿನುದ್ದಕ್ಕೂ ಅವರು ಇಟ್ಟ ಹೆಜ್ಜೆಗಳು ಸಾಕಷ್ಟು ಜನರಿಗೆ ಮಾದರಿಯಾಗಿವೆ ಎಂದಿದ್ದಾರೆ.
ಅವರ ಹೆಜ್ಜೆಗಳು ಅವರನ್ನು ಇನ್ನಷ್ಟು ಜ್ಞಾನಮುಖಿಯನ್ನಾಗಿಸಿವೆ, ಸ್ವಸ್ಥ ಸಮಾಜ ಸೇವೆ ಮೂಲಕ ನಿಷ್ಠೆಯಿಂದ ಪರಮೇಶ್ವರ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಇನ್ನಷ್ಟು ಸೇವಾ ಅವಕಾಶಗಳು ಒದಗಿಬರಲಿ ಎಂದು ಸ್ವಾಮೀಜಿ ಹಾರೈಸಿದ್ದಾರೆ.
ಸಮಾರಂಭದಲ್ಲಿ ಆಶ್ರಮದ ನಿರ್ದೇಶಕಿ ಶ್ರೀಮತಿ ರಜನಿ. ಸಿ. ಭಟ್, ರಾಘವ್ ಸೂರ್ಯ,ರೋಶಿನಿ ಸಿ ಭಟ್ ರಾಹುಲ್ ಸಿ ಭಟ್,ಆಶ್ರಮದ ಸಂಚಾಲಕರಾದ ಪುನೀತ್ ಕೃಷ್ಣ ಭದ್ರತಾಧಿಕಾರಿ ಪ್ರದೀಪ್ ಗೌಡ, ರಾಜು ಎಸ್ ಉಪಸ್ಥಿತರಿದ್ದರು.