ಹೊಸ ದಿಗಂತ ವರದಿ, ಕಾರವಾರ:
ಅಕ್ರಮವಾಗಿ ಗೋವಾ ಸಾರಾಯಿ ಸಾಗಿಸುತ್ತಿದ್ದ ವಾಹನವನ್ನು ಕಾರವಾರ ಶಹರ ಠಾಣೆ ಪೊಲೀಸರು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.
ಕಾರವಾರ ಅಸ್ನೊಟಿ ನಿವಾಸಿ ಸಂತೋಷ ಅಶೋಕ ಟಾಕರಕರ್(20) ಯಲ್ಲಾಪುರ ಗುಳ್ಳಾಪುರ ಕಲ್ಲೇಶ್ವರ ನಿವಾಸಿ ವಾಹನ ಚಾಲಕ ಪ್ರಸಾದ ರಾಮಾ ದೇಸಾಯಿ 24 ಬಂಧಿತ ಆರೋಪಿಗಳಾಗಿದ್ದು ಇವರಿಂದ 1.18 ಲಕ್ಷ ಮೌಲ್ಯದ ಗೋವಾ ರಾಜ್ಯದ ಸರಾಯಿ ತುಂಬಿರುವ ಮೂಟೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸರಾಯಿ ಸಾಗಾಟಕ್ಕೆ ಬಳಸಿದ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ಜಿ.ಎ 08ಯು 4657 ನೋಂದಣಿ ಸಂಖ್ಯೆಯ ವಾಹನ ಜಪ್ತು ಮಾಡಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠ ವಿಷ್ಣುವರ್ಧನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ ಅವರ ಮಾರ್ಗದರ್ಶನದಲ್ಲಿ ಡಿ.ವೈ.ಎಸ್. ಪಿ ವೆಲಂಟನ್ ಡಿಸೋಜ, ಸಿ.ಪಿ.ಐ ಸಿದ್ಧಪ್ಪ ಬೀಳಗಿ ನೇತೃತ್ವದಲ್ಲಿ ಪಿ.ಎಸ್. ಐ ಕುಮಾರ ಕಾಂಬಳೆ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.