ಹೊಸ ದಿಗಂತ ಡಿಜಿಟಲ್ ಡೆಸ್ಕ್
ಕೊಳ್ಳೇಗಾಲದಲ್ಲಿ ಅಮರಾಲಯ ಸೇವಾಧಾಮ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹರಾದ ಮುಕುಂದ ಸಿ. ಆರ್ ಶುಕ್ರವಾರ ಭಾಗವಹಿಸಿದರು.
ಬೈಸಾನಿ ಸುಬ್ರಹ್ಮಣ್ಯ ಗುಪ್ತ ಅವರ ಕುಟುಂಬ ಹಾಗೂ ಲೋಕಸೇವಾ ಪ್ರತಿಷ್ಠಾನವು ಅಮರಾಲಯ ಸೇವಾಧಾಮವನ್ನು ಸ್ಥಾಪಿಸಿವೆ. ಸೇವಾಧಾಮವು ಗ್ರಾಮೀಣ ಪ್ರದೇಶಗಳ ಅಲಕ್ಷಿತ ಸಮುದಾಯಗಳ ನಡುವೆ ಶಿಕ್ಷಣ, ಆರೋಗ್ಯಸೇವೆಗಳನ್ನು ನೀಡಲಿದೆ. ಜನರಲ್ಲಿ ಸ್ವಾವಲಂಬನೆ ಮತ್ತು ಸಾಮಾಜಿಕ ಭದ್ರತೆ ವಿಧಾನಗಳನ್ನೂ ಇದು ಪ್ರಚುರಪಡಿಸಲಿದೆ.