ಮಳೆ ಕೊರತೆಯಿಂದ ಕೈ ಹಿಡಿಯದ ಬೆಳೆ: ಮನನೊಂದು ರೈತ ಆತ್ಮಹತ್ಯೆ

ಹೊಸದಿಗಂತ ವರದಿ, ಬನವಾಸಿ:

ಮಳೆ ಕೊರತೆಯಿಂದ ಮೆಕ್ಕೆಜೋಳ ಹಾಗೂ ಅಡಿಕೆ ಬೆಳೆ ನಾಶವಾಗಿದ್ದು, ಇದರಿಂದ ಬೇಸರಗೊಂಡು ರೈತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಬ್ಬತ್ತಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಅಂಡಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬತ್ತಿ ಗ್ರಾಮದ ಜಗದೀಶ ಚೆನ್ನಪ್ಪ ಚನ್ನಯ್ಯ (64) ಆತ್ಮಹತ್ಯೆಗೆ ಶರಣಾದ ರೈತ.

ಇವರು ಅಂಡಗಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದಲ್ಲಿ ₹3 ಲಕ್ಷ ಸಾಲ ಮಾಡಿ ಕೃಷಿ ಮಾಡಿದ್ದು,ಆ ಹಣದಲ್ಲಿ ಕೊಳವೆಬಾವಿ ಕೊರೆಸಿದ್ದು, ಮಳೆ ಕೊರತೆಯ ಕಾರಣ ನೀರು ಸ್ಥಗಿತವಾಗಿತ್ತು. ಇದರಿಂದ ಎರಡುವರೆ ಎಕರೆ ಜಾಗದಲ್ಲಿ ಬೆಳೆದ ಅಡಿಕೆ, ಮೆಕ್ಕೆಜೋಳ ಒಣಗಿ ಹೋಗಿತ್ತು. ಇದರಿಂದ ಮನನೊಂದು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬನವಾಸಿ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!