ಹೊಸದಿಗಂತ ಡಿಜಿಟಲ್ ಡೆಸ್ಕ್:
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿಯೋಗ ಗುರು ಬಾಬಾ ರಾಮದೇವ್ಗೆ ಬಾರ್ಮರ್ ಚೋಟಾನ್ ಪೊಲೀಸ್ ಠಾಣೆಯಲ್ಲಿ ಅ. 5ರಂದು ಹಾಜರಾಗುವಂತೆ ರಾಜಸ್ಥಾನ ಹೈಕೋರ್ಟ್ ನಿರ್ದೇಶಿಸಿದೆ.
ತನಿಖಾಧಿಕಾರಿ ಯಾವಾಗೆಲ್ಲ ಕರೆಯುತ್ತಾರೋ ಆಗ ಠಾಣೆಗೆ ಹಾಜರಾಗಬೇಕು.ಜತೆಗೆ ಪ್ರಕರಣದ ದಿನಚರಿಯನ್ನು ಅ. 16ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ಗೆ ಸೂಚಿಸಿದೆ. ಜೊತೆಗೆ ರಾಮ್ದೇವ್ ಬಂಧನಕ್ಕೆ ನೀಡಿದ ತಡೆಯನ್ನು ಹೈಕೋರ್ಟ್ ವಿಸ್ತರಿಸಿದೆ.
ಎಫ್ಐಆರ್ ರದ್ದು ಕೋರಿ ಬಾಬಾ ರಾಮ್ದೇವ್ ಹೈಕೋರ್ಟ್ ಮೊರೆ ಹೋಗಿದ್ದರು.
2023ರ ಫೆ. 2ರಂದು ಬಾರ್ಮರ್ನಲ್ಲಿ ನಡೆದಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಬಾಬಾ ರಾಮ್ದೇವ್ ಅವರು ಮುಸ್ಲಿಮರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎಂಬ ದೂರು ದಾಖಲಾಗಿತ್ತು.