Tuesday, December 23, 2025

‘ರೌಡಿ ಜನಾರ್ಧನ್’ ಟೀಸರ್‌ ಔಟ್‌: ವಿಜಯ್ ದೇವರಕೊಂಡ ವೈಯಲೆಂಟ್ ಅವತಾರ ಕಂಡು ರಶ್ಮಿಕಾ ಮಂದಣ್ಣ ಏನಂದ್ರು?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ತೆಲುಗು ಚಿತ್ರರಂಗದ ಸ್ಟಾರ್ ನಟ ವಿಜಯ್ ದೇವರಕೊಂಡ ‘ರೌಡಿ ಜನಾರ್ಧನ್’ ಹೆಸರಿನ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಟೀಸರ್ ಇಂದು ಬಿಡುಗಡೆ ಆಗಿದ್ದು, ಟೀಸರ್​​ನಲ್ಲಿ ರಕ್ತವನ್ನು ಮೈಗೆಲ್ಲ ಮೆತ್ತಿಕೊಂಡು ಬರಿಮೈಯಲ್ಲಿ ಕಾಣಿಸಿಕೊಂಡಿದ್ದಾರೆ.

ರವಿ ಕಿರಣ್ ಕೋಲಾ ನಿರ್ದೇಶನದ ಈ ಪ್ಯಾನ್-ಇಂಡಿಯನ್ ಚಿತ್ರವು ಗ್ರಾಮೀಣ ಹಿನ್ನೆಲೆಯೊಂದಿಗೆ ಆಕ್ಷನ್ ಚಿತ್ರವಾಗಿ ರೂಪುಗೊಳ್ಳುತ್ತಿದೆ. ವಿಜಯ್ ದೇವರಕೊಂಡ ಅವರನ್ನು ಪರಿಚಯಿಸುತ್ತಿರುವುದರಿಂದ ಶೀರ್ಷಿಕೆಯ ಕಿರುನೋಟವು ಅಭಿಮಾನಿಗಳ ಗಮನವನ್ನು ಸಂಪೂರ್ಣವಾಗಿ ಸೆಳೆದಿದೆ.

ಹೈದರಾಬಾದ್‌ನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ‘ರೌಡಿ ಜನಾರ್ದನ’ ಚಿತ್ರದ ಟೈಟಲ್ ಗ್ಲಿಂಪ್ ಅನ್ನು ಅಧಿಕೃತವಾಗಿ ಅನಾವರಣಗೊಳಿಸಲಾಯಿತು. ವಿಜಯ್ ದೇವರಕೊಂಡ ಅವರು ಖುದ್ದಾಗಿ ಹಾಜರಿಲ್ಲದಿದ್ದರೂ, ನಿರ್ಮಾಪಕ ದಿಲ್ ರಾಜು ಮತ್ತು ನಿರ್ದೇಶಕ ರವಿ ಕಿರಣ್ ಕೋಲಾ ಮಾಧ್ಯಮಗಳನ್ನು ಭೇಟಿ ಮಾಡಿ ಚಿತ್ರದ ಪ್ರಮುಖ ಅಂಶಗಳನ್ನು ಹಂಚಿಕೊಂಡರು.

ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ಮೊದಲ ಬಾರಿಗೆ ಪೂರ್ವ ಗೋದಾವರಿ ಉಚ್ಚಾರಣೆಯಲ್ಲಿ ಮಾತನಾಡಲಿದ್ದಾರೆ ಎಂದು ದಿಲ್ ರಾಜು ಘೋಷಿಸಿದ್ದು ಅಭಿಮಾನಿಗಳಲ್ಲಿ ಹೆಚ್ಚಿನ ಉತ್ಸಾಹವನ್ನು ಉಂಟುಮಾಡಿತು. ಅದು ಈ ಪಾತ್ರದ ಸತ್ಯಾಸತ್ಯತೆಯನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ.

ಸಿನಿಮಾದ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ, ‘ಲೆಟ್ಸ್ ಗೋ…’ ಎಂದು ಉತ್ಸಾಹ ವ್ಯಕ್ತಪಡಿಸಿದ್ದಾರೆ. ‘ರೌಡಿ ಜನಾರ್ಧನ್’ ಸಿನಿಮಾವನ್ನು ತೆಲುಗಿನ ನಿರ್ದೇಶಕ ರವಿ ಕಿರಣ್ ಕೊಲ್ಲ ನಿರ್ದೇಶನ ಮಾಡುತ್ತಿದ್ದಾರೆ.

ರಾಯಲಸೀಮಾದ ಹಿನ್ನೆಲೆಯಲ್ಲಿ ಹೆಣೆಯಲಾದ ಈ ಚಿತ್ರವು ರಾಜಕೀಯ ಕಥಾಹಂದರವನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ವಿಜಯ್ ದೇವರಕೊಂಡ ಅವರ ದೇಹ ಭಾಷೆ, ನೋಟ ಮತ್ತು ಸಂಭಾಷಣೆ ಎಲ್ಲವೂ ಶೀರ್ಷಿಕೆಯ ನೋಟದಲ್ಲಿ ಬಹಳ ತೀವ್ರವಾಗಿವೆ.

ರೌಡಿ ಜನಾರ್ದನ’ ಚಿತ್ರದಲ್ಲಿ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸಿದ್ದಾರೆ. ಕ್ರಿಸ್ಟೋ ಕ್ಸೇವಿಯರ್ ಸಂಗೀತ ಮತ್ತು ಆನಂದ್ ಸಿ. ಚಂದ್ರನ್ ಛಾಯಾಗ್ರಹಣ ಇದಕ್ಕೆ ಇದೆ. ದೊಡ್ಡ ಬಜೆಟ್ ಚಿತ್ರದ ಚಿತ್ರೀಕರಣ ಪ್ರಸ್ತುತ ಭರದಿಂದ ಸಾಗುತ್ತಿದೆ.

error: Content is protected !!