ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೋದಿ ಸರ್ಕಾರ ಹೈದರಾಬಾದ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಿದೆ. ಈ ಕುರಿತು ಶೀಘ್ರದಲ್ಲೇ ಘೋಷಣೆ ಮಾಡಲಾಗುವುದು. ಕಿಶನ್ ರೆಡ್ಡಿ ಈಗಾಗಲೇ ಕ್ಷೇತ್ರಕ್ಕೆ ಆಗಮಿಸಿ ಕಂಟೋನ್ಮೆಂಟ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಜೂನ್ 2024 ರಿಂದ ಹೈದರಾಬಾದ್ ಕೇಂದ್ರಾಡಳಿತ ಪ್ರದೇಶವಾಗುವ ಸಾಧ್ಯತೆಯಿದೆ ಎಂಬ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.
Hyderabad “UT” అంటగా 🤣🤣
మా బాబుగారు కట్టిన “సైబరాబాద్” ఇప్పుటి వరకూ enjoy చేసారు 😁😁
అయ్యో అమరావతి 5 years లో కట్టలేరపోయారు అన్నారు కదా మీరు 3 years కట్టేయండి 😆😆
— Geetha vijaya ™️ 😍✌️ (@geetha_happy2) September 21, 2023
ಕೇಂದ್ರದಿಂದ ಘೋಷಣೆಯಾಗದಿದ್ದರೂ…ನೆಟ್ನಲ್ಲಿ ತಮ್ಮದೇ ಆದ ರೀತಿಯಲ್ಲಿ ಕಥೆಗಳನ್ನು ಹೆಣೆಯುತ್ತಿದ್ದಾರೆ. 2024ಕ್ಕೆ ತೆಲಂಗಾಣ ರಚನೆಯಾಗಿ ಹತ್ತು ವರ್ಷವಾಗಲಿದೆ. ಈ ಹತ್ತು ವರ್ಷಗಳಿಂದ ತೆಲಂಗಾಣದ ಜೊತೆಗೆ ಆಂಧ್ರಪ್ರದೇಶ ಹೈದರಾಬಾದ್ ಅನ್ನು ಜಂಟಿ ರಾಜಧಾನಿಯನ್ನಾಗಿ ಕೇಂದ್ರ ನಿರ್ಧರಿಸಿರುವುದು ಗೊತ್ತೇ ಇದೆ. ಈ ಗಡುವು 2024ಕ್ಕೆ ಪೂರ್ಣಗೊಳ್ಳಲಿದೆ ಎಂಬ ಚರ್ಚೆಯೂ ಶುರುವಾಗಿದೆ.
If Hyderabad is announced as UT,
Then Rest of Telangana might burn.It'd help KCR to win elections again. 🥲🤷😅
What's in the minds of Delhi? 👀👀
— VJV 🇮🇳 (@vjvwebworld) September 21, 2023
ಟಿಡಿಪಿ ಮತ್ತು ಬಿಆರ್ಎಸ್ನ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಚರ್ಚೆಗಿಳಿದಿದ್ದಾರೆ. ಹೈದರಾಬಾದ್ ಈ ಮಟ್ಟದಲ್ಲಿರಲು ಚಂದ್ರಬಾಬು ಅವರೇ ಕಾರಣ ಎಂದವರು.. ಐದು ವರ್ಷ ಕಳೆದರೂ ಏಕೆ ಅಮರಾವತಿ ನಿರ್ಮಿಸಲು ಸಾಧ್ಯವಾಗಲಿಲ್ಲ ಎಂದು ಬಿಆರ್ಎಸ್ ಪಕ್ಷದವರು ಕಾಲೆಳೆಯುತ್ತಿದ್ದಾರೆ. ಈಗ ಹೈದರಾಬಾದ್ ಕೇಂದ್ರಾಡಳಿತ ಪ್ರದೇಶವಾದರೆ, ಇನ್ನೊಂದು ನಗರ ನೋಡಿಕೊಳ್ಳಿ ಎಂಬ ಪೋಸ್ಟ್ಗಳೂ ಹರಿದಾಡುತ್ತಿವೆ.