ಕ್ಷುಲ್ಲಕ ವಿಚಾರಕ್ಕೆ ಜಗಳ: ಪಿಡಿಒ ಮೇಲೆ ಹಲ್ಲೆ

ಹೊಸದಿಗಂತ ವರದಿ, ಕುಕನೂರು:

ಕ್ಷುಲ್ಲಕ ವಿಚಾರಕ್ಕೆ ಪಿಡಿಒ ಮೇಲೆ ಹಲ್ಲೆ ಮಾಡಿದ ಘಟನೆ ಕುಕನೂರು ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ನಡೆದಿದೆ.

ಪಿಡಿಒ ಹನುಮಂತಪ್ಪ ಎಂಬುವವರ ಮೇಲೆ ಮರಿಸ್ವಾಮಿ ಎಂಬಾತ ಹಲ್ಲೆ ಮಾಡಿದ್ದಾನೆ. ನಿವೇಶನದ ದಾಖಲೆ ಒದಗಿಸಲು ಗ್ರಾಪಂಗೆ ಮರಿಸ್ವಾಮಿ ಅರ್ಜಿ ಸಲ್ಲಿಸಿದ್ದ. ಆದರೆ, ಪಿಡಿಒ ದಾಖಲೆ ನೀಡಲು ವಿಳಂಬ ಮಾಡಿದ್ದರು. ಈ ಕುರಿತು ವಿಚಾರಿಸಲು ಬಂದಾಗ ಪಿಡಿಒ ಹಾಗೂ ಮರಿಸ್ವಾಮಿ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ರೊಚ್ಚಿಗೆದ್ದ ಮರಿಸ್ವಾಮಿ, ಹನುಮಂತಪ್ಪ ಮೇಲೆ ಹಲ್ಲೆ ಮಾಡಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here