ಉತ್ತರಕಾಶಿ ಸುರಂಗ ಕುಸಿತ: 10ನೇ ದಿನವೂ ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗ ಕುಸಿದು ಹತ್ತು ದಿನಗಳು ಕಳೆದರೂ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಸುರಂಗದೊಳಗೆ  ಸಿಕ್ಕಿಬಿದ್ದ ಕಾರ್ಮಿಕರಿಗೆ ಆಹಾರ ಪೂರೈಕೆ ಮಾಡಲಾಗುತ್ತಿದೆ. ಒಎನ್‌ಜಿಸಿ, ಎಸ್‌ಜೆವಿಎನ್‌ಎಲ್‌, ಆರ್‌ವಿಎನ್‌ಎಲ್‌, ಎನ್‌ಎಚ್‌ಐಡಿಸಿಎಲ್‌ ಮತ್ತು ಟಿಎಚ್‌ಡಿಸಿಎಲ್‌ ಎಂಬ ಒಟ್ಟು ಐದು ಏಜೆನ್ಸಿಗಳ 41 ಕಾರ್ಮಿಕರು ಸುರಂಗದೊಳಗೆ ಸಿಲುಕಿದ್ದಾರೆ.

ಸೋಮವಾರ ಸಂಜೆ 6 ಇಂಚು ಅಗಲದ ಪೈಪ್ ಹಾಕುವ ಮೂಲಕ ಪ್ರಗತಿ ಸಾಧಿಸಿದ್ದರೂ, ಸಿಲಿಂಡರಾಕಾರದ ಪ್ಲಾಸ್ಟಿಕ್ ಬಾಟಲಿಗಳಲ್ಲಿನ ಖಿಚಡಿ ಹಾದುಹೋಗಲು ಸಾಧ್ಯವಾಗದ ಕಾರಣ ಸಿಕ್ಕಿಬಿದ್ದ ಜನರಿಗೆ ಇಂದು ಬಾಳೆಹಣ್ಣು, ಕಿತ್ತಳೆ ಮತ್ತು ಔಷಧಗಳನ್ನು  ಮಾತ್ರ ಒದಗಿಸಲಾಯಿತು.

ಪಾರುಗಾಣಿಕಾ ಯೋಜನೆಯ ಪ್ರಕಾರ, 900 ಎಂಎಂ ಪೈಪ್‌ಗಳನ್ನ ಡ್ರಿಲ್ಲಿಂಗ್ ಉಪಕರಣಗಳನ್ನು ಬಳಸಿಕೊಂಡು ಕಾರ್ಮಿಕರನ್ನು ಪಾರು ಮಾಡಲು ಬಳಸಲಾಗುತ್ತಿದೆ. ಪ್ರಸ್ತುತ, ವಿವಿಧ ಏಜೆನ್ಸಿಗಳು, ಎನ್‌ಡಿಆರ್‌ಎಫ್, ಐಟಿಬಿಪಿ, ಆರ್ಮಿ ಇಂಜಿನಿಯರ್‌ಗಳು, ಎಸ್‌ಡಿಆರ್‌ಎಫ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಮತ್ತು ಕೇಂದ್ರ ಸರ್ಕಾರದ ಇತರ ತಾಂತ್ರಿಕ ಏಜೆನ್ಸಿಗಳು ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!