ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ಥಾನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ಹಲವಾರು ವಿಷಯಗಳ ಕುರಿತು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು. ಈ ಬಾರಿ ಮಾತ್ರವಲ್ಲದೆ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರವು ರಾಜ್ಯದಲ್ಲಿ ಎಂದಿಗೂ ರಚನೆಯಾಗುವುದಿಲ್ಲ ಎಂದು ಪ್ರಧಾನಿ ಭವಿಷ್ಯವಾಣಿ ನುಡಿದರು.
ಚುನಾವಣಾ ಕಣದಲ್ಲಿರುವ ರಾಜಸ್ಥಾನದ ಡುಂಗರ್ಪುರದ ಸಗ್ವಾರಾದಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ..”ಇಂದು, ಮಾವಜಿ ಮಹಾರಾಜರ ಆಶೀರ್ವಾದವನ್ನು ತೆಗೆದುಕೊಂಡು, ನಾನು ಭವಿಷ್ಯ ನುಡಿಯಲು ಧೈರ್ಯ ಮಾಡುತ್ತಿದ್ದೇನೆ. ಈ ಪುಣ್ಯಭೂಮಿಯ ಶಕ್ತಿಯೇ ನನ್ನ ಮನಸ್ಸಿಗೆ ಈ ಆಲೋಚನೆ ತಂದಿದೆ. ಇನ್ನೆಂದೂ ಅಶೋಕ್ ಗೆಹ್ಲೋಟ್ ಅವರ ಸರ್ಕಾರ ರಾಜಸ್ಥಾನದಲ್ಲಿ ರಚನೆಯಾಗುವುದಿಲ್ಲ” ಎಂದರು.
ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದಲ್ಲಿ ಗೆಹ್ಲೋಟ್ ಸರ್ಕಾರವನ್ನು ಟೀಕಿಸಿದ ಅವರು, ಶಿಕ್ಷಣದ ಭೀಕರ ನೀತಿಗಳಿಂದ ಯುವಕರ ಕನಸುಗಳು ಭಗ್ನಗೊಂಡಿವೆ. ಎಲ್ಲಾ ಸರ್ಕಾರಿ ನೇಮಕಾತಿಗಳಲ್ಲಿ ರಾಜ್ಯ ಸರ್ಕಾರವು ಹಗರಣಗಳನ್ನು ನಡೆಸುತ್ತಿದೆ ಎಂದು ಪ್ರಧಾನಿ ಆರೋಪಿಸಿದರು.
ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ತರಲು ಜನರಲ್ಲಿ ಮನವಿ ಮಾಡಿದ ಅವರು ಕಾಂಗ್ರೆಸ್ ಅನ್ನು ಅಧಿಕಾರದಿಂದ ಕಿತ್ತೊಗೆಯುವುದು ಮುಖ್ಯವಾಗಿದೆ, ಇದರಿಂದ ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳು ರಾಜ್ಯದಲ್ಲಿ ತ್ವರಿತವಾಗಿ ಅನುಷ್ಠಾನಗೊಳ್ಳಲು ಸಾಧ್ಯ ಎಂದು ಹೇಳಿದರು.
ಕಾಂಗ್ರೆಸ್ ನಾಯಕರು ಎಲ್ಲೆಲ್ಲಿ ಮತ ಕೇಳಲು ಹೋದರೂ ಅವರಿಗೆ ಒಂದೇ ಉತ್ತರ ಸಿಗುತ್ತಿದೆ – ಅದೇ ಗೆಹ್ಲೋಟ್ ಜಿ, ನಿಮಗೆ ಮತಗಳು ಬರುವುದಿಲ್ಲ ಎಂಬ ಧ್ವನಿ ಎಂದರು.
2023 ರ ರಾಜಸ್ಥಾನ ಅಸೆಂಬ್ಲಿ ಚುನಾವಣೆಯು ಆಡಳಿತಾರೂಢ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಮತ್ತು ಭಾರತೀಯ ಜನತಾ ಪಕ್ಷ (BJP) ನಡುವೆ ದ್ವಿಮುಖ ಸ್ಪರ್ಧೆಯಾಗಿದೆ. ಏಕೆಂದರೆ ವಿವಿಧ ಪ್ರಾದೇಶಿಕ ಮತ್ತು ಸಣ್ಣ ಪಕ್ಷಗಳು ತಮ್ಮ ಪ್ರಭಾವ ಬೀರಲು ಪ್ರಯತ್ನಿಸುತ್ತಿವೆ.