ಹೊಸದಿಗಂತ ವರದಿ, ಮೈಸೂರು:
ವಿಶ್ವಕಪ್ನಲ್ಲಿ ಭಾರತದ ಸೋಲನ್ನು ಕೆಲ ಪಾಕ್ ಕ್ರಿಕೆಟಿಗರು ಆನಂದಿಸುತ್ತಿದ್ದು, ಕೆಲ ದಿನಗಳ ಹಿಂದೆ ಅಶ್ಲೀಲ ಕಾಮೆಂಟ್ ಮೂಲಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದ ಪಾಕಿಸ್ತಾನದ ಮಾಜಿ ಆಲ್ರೌಂಡರ್ ಅಬ್ದುಲ್ ರಜಾಕ್ ಇದೀಗ ಮತ್ತೊಮ್ಮೆ ನಾಲಿಗೆ ಹರಿಬಿಟ್ಟಿದ್ದು, ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಪಾಕಿಸ್ತಾನದ ಶೋ ಒಂದರಲ್ಲಿ ಮಾತನಾಡಿರುವ ರಜಾಕ್, ವಿಶ್ವಕಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತಿದ್ದನ್ನು ನೋಡಿ ಸಂತೋಷವಾಯಿತು ಎಂದಿದ್ದಾರೆ.
ಭಾರತ ಸೋಲಿಗೆ ಅವರು ಮಾಡಿದ ಕರ್ಮಗಳೇ ಕಾರಣ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ನಾನು ಪ್ರಾಮಾಣಿಕನಾಗಿದ್ದರೆ, ಕ್ರಿಕೆಟ್ ಗೆಲ್ಲುತ್ತೇನೆ. ಅವರು ಮೈದಾನದ ಪರಿಸ್ಥಿತಿಯನ್ನು ಅವರ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡರು. ಒಂದು ವೇಳೆ ಭಾರತ ವಿಶ್ವಕಪ್ ಗೆದ್ದಿದ್ದರೆ ಕ್ರಿಕೆಟ್ ಪಾಲಿಗೆ ಅದು ದುಃಖದ ಕ್ಷಣವಾಗುತ್ತಿತ್ತು. ಧೈರ್ಯಶಾಲಿ ಮತ್ತು ಮಾನಸಿಕವಾಗಿ ಸದೃಢವಾಗಿರುವ ತಂಡಕ್ಕೆ ಮಾತ್ರ ಕ್ರಿಕೆಟ್ ಸಹಾಯ ಮಾಡುತ್ತದೆ. ಆಸ್ಟ್ರೇಲಿಯಾ ಗೆಲುವು ಕ್ರಿಕೆಟ್ನ ಗೆಲುವು ಎಂದು ಹೇಳಿಕೊಂಡಿದ್ದಾರೆ
ಪಿಚ್ಗಳು ಮತ್ತು ವಾತಾವರಣವು ಎರಡೂ ತಂಡಗಳಿಗೆ ನ್ಯಾಯಯುತವಾಗಿರಬೇಕು ಮತ್ತು ಸಮತೋಲಿತವಾಗಿರಬೇಕು. ಆದರೆ, ಭಾರತ ಫೈನಲ್ನಲ್ಲಿಯೂ ಲಾಭ ಪಡೆಯಲು ಪ್ರಯತ್ನಿಸಿತು ಮತ್ತು ಕೊಹ್ಲಿ ಮತ್ತೊಂದು ಶತಕ ಬಾರಿಸಿದ್ದರೆ ಭಾರತ ಮತ್ತೊಮ್ಮೆ ಪಂದ್ಯವನ್ನು ಗೆಲ್ಲಬಹುದಿತ್ತು. ಭಾರತ, ವಿಭಿನ್ನ ಪರಿಸ್ಥಿತಿಗಳಲ್ಲಿ 10 ಪಂದ್ಯಗಳನ್ನು ಗೆದ್ದಿದೆ. ಆದರೆ, ಅತ್ಯಂತ ಮುಖ್ಯವಾದ ಫೈನಲ್ನಲ್ಲಿ ಪರಿಸ್ಥಿತಿಗಳನ್ನು ಸರಿಯಾಗಿ ಓದದೆ ಭಾರತ ಬಲಿಪಶುವಾಯಿತು. ಭಾರತ ತಂಡದ ನಾಯಕ ರೋಹಿತ್ ಶರ್ಮ ಅವರನ್ನು ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಆದಾಗ್ಯೂ, ಟಾಸ್ ಫಲಿತಾಂಶದಲ್ಲಿ ಯಾವುದೇ ವ್ಯತ್ಯಾಸವನ್ನು ಉಂಟುಮಾಡುವುದಿಲ್ಲ, ಏಕೆಂದರೆ ರೋಹಿತ್ ಅವರು ಮೊದಲು ಬ್ಯಾಟಿಂಗ್ ಮಾಡಲು ಮಾತ್ರ ನೋಡುತ್ತಿದ್ದೇವೆ ಹೇಳಿದ್ದರು ಎಂದರು.