ಹೊಸದಿಗಂತ ವರದಿ ಅರಕಲಗೂಡು:
ನವೆಂಬರ್ 25ರಂದು ಉತ್ಥಾನ ದ್ವಾದಶಿ ಅಂಗವಾಗಿ ಅರಕಲಗೂಡು ಪಟ್ಟಣದ ಐತಿಹಾಸಿಕ ದೇವಾಲಯ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯವರ ಬೃಂದಾವನೋತ್ಸವ ವಿಜೃಂಭಣೆಯಿಂದ ನೆರವೇರಿತು.
ಶುಕ್ರವಾರ ರಾತ್ರಿ ಪುಷ್ಪಾಲಂಕಾರ, ದೀಪಾಲಂಕಾರಗಳಿಂದ ಶ್ರೀಯವರನ್ನು ಪಟ್ಟಣದ ರಥ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು.
ಈ ವೇಳೆ ಪ್ರತಿ ಮನೆಯ ಮುಂದೆ ಹಣ್ಣು, ಕಾಯಿ ನೀಡಿ ದೇವರಿಗೆ ಸೇವೆ ಅರ್ಪಿಸಿ ಆಸ್ತಿಕರು ಭಕ್ತಿ ಮೆರೆದರು. ನಂತರ ಶ್ರೀಯವರನ್ನು ಸ್ವಸ್ಥಾನಕ್ಕೆ ತಂದು ಮಂಗಳಾರತಿಪ್ರಸಾದ ವಿನಿಯೋಗ ಮಾಡಲಾಯಿತು.