ಪಾದಯಾತ್ರೆ ನಡೆಸಿ ಜನರ ಅಹವಾಲುಗಳ ಆಲಿಸಿದ ಶಾಸಕ ಟಿ.ಎಸ್.ಶ್ರೀವತ್ಸ

ಹೊಸ ದಿಗಂತ ವರದಿ, ಮೈಸೂರು:

ಮೈಸೂರು ಕೆ.ಆರ್.ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಅವರು ಶನಿವಾರ ವಿವಿಧೆಡೆ ಪಾದಯಾತ್ರೆ ನಡೆಸುವ ಮೂಲಕ ಜನರ ಅಹವಾಲುಗಳನ್ನು ಆಲಿಸಿದರು.

ಕುವೆಂಪುನಗರದ ವಾರ್ಡ್ ನಂಬರ್ 59 ರ ವ್ಯಾಪ್ತಿಯ ನಿಮಿಷಾಂಬ ನಗರ, ಹುಡ್ಕೊ ಹೌಸ್, ಕುವೆಂಪುನಗರ ಬಸ್ ಡಿಪೋ ಸುತ್ತಮುತ್ತ ಮನೆಮನೆಗೆ ತೆರಳಿ ಪಾದಯಾತ್ರೆಯನ್ನು ನಡೆಸಿದರು.

ಸಾರ್ವಜನಿಕರ ಸಮಸ್ಯೆಗಳಾದ ಕುಡಿಯುವ ನೀರಿನ ಸಮಸ್ಯೆ, ಒಳ ಚರಂಡಿ,ಖಾಲಿ ನಿವೇಶನ ಗಳ ಸ್ವಚ್ಚತೆ,ಬೀದಿ ದೀಪಗಳ ಅಳವಡಿಕೆ,ಬೀದಿ ನಾಯಿ ಗಳ ಹಾವಳಿ,ಪೋಲಿ ಹುಡುಗರ ವಾಹನ ಚಾಲನೆ, ಇನ್ನೂ ಮುಂತಾದ ಸಮಸ್ಯೆಗಳನ್ನು ಆಲಿಸಿದ ಶಾಸಕರು, ಸ್ಥಳದಲ್ಲೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಕ್ಷೇತ್ರ ಕ್ಕೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!