ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲ್ಕ್ಯಾರ ಸುರಂಗದಿಂದ ಸುರಕ್ಷಿತವಾಗಿ ಹೊರಬಂದ ಕಾರ್ಮಿಕರಿಗೆ ತಲಾ ಒಂದು ಲಕ್ಷ ರೂಪಾಯಿಯನ್ನು ಉತ್ತರಾಖಂಡ ಸರ್ಕಾರ ಘೋಷಣೆ ಮಾಡಿದೆ.
ಮಂಗಳವಾರ ರಾತ್ರಿ 41 ಕಾರ್ಮಿಕರನ್ನು ಯಶಸ್ವಿಯಾಗಿ ಸ್ಥಳಾಂತರಿಸಲಾಗಿದೆ. ನಿರ್ಮಾಣ ಹಂತದಲ್ಲಿರುವ ಇತರ ಟನಲ್ಗಳನ್ನೂ ಪರಿಶೀಲನೆ ಮಾಡಲಾಗುವುದು ಎಂದು ಸಿಎಂ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.
ಯುವ ಕಾರ್ಮಿಕರಿಂದ ಮಾತ್ರ ಇದು ಸಾಧ್ಯ, ಸುರಂಗದ ಒಳಗೆ ಸಿಲುಕಿದ ನಂತರ ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯವಾಗಿರುವುದು ಕಷ್ಟ. ಆದರೆ ಮಾನಸಿಕ ಸ್ಥೈರ್ಯ ಕಳೆದುಕೊಳ್ಳದ ಕಾರ್ಮಿಕರಿಗೆ ಸಲಾಂ ಹೇಳುತ್ತೇನೆ. ಇನ್ನು ರಕ್ಷಣಾ ಕಾರ್ಯಾಚರಣೆಯಾದ್ಯಂತ ಪ್ರಧಾನಿ ಮೋದಿ ನಮ್ಮ ಬೆಂಬಲಕ್ಕೆ ನಿಂತಿದ್ದಾರೆ. ರಕ್ಷಣೆಗೆ ಹಗಲು ರಾತ್ರಿ ದುಡಿದವರಿಗೂ ನಮ್ಮ ಅನಂತ ಅನಂತ ಧನ್ಯವಾದಗಳು ಎಂದಿದ್ದಾರೆ.
ಕೊರೆತ ಸಂದರ್ಭದಲ್ಲಿ ದೇವಾಲಯವನ್ನು ನೆಲಸಮ ಮಾಡಲಾಗಿತ್ತು, ಇದೀಗ ಬೌಖ್ನಾಗ್ ದೇವಾಲಯ ಪುನರ್ನಿರ್ಮಾಣ ಮಾಡಲಾಗುವುದು. 41 ಕಾರ್ಮಿಕರಿಗೂ ತಲಾ ಒಂದು ಲಕ್ಷ ರೂಪಾಯಿ ನೀಡಲಾಗುತ್ತದೆ ಎಂದು ಘೋಷಣೆ ಮಾಡಿದರು.