ಸಿಲ್ಕ್ಯಾರಾ ಸುರಂಗದಿಂದ ಹೊರಬಂದ ಕಾರ್ಮಿಕರನ್ನು ಭೇಟಿ ಮಾಡಿದ ಯುಪಿ ಸಿಎಂ ಯೋಗಿ ಆದಿತ್ಯನಾಥ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಿಂದ ಸುರಕ್ಷಿತವಾಗಿ ಹೊರಬಂದ 41 ಕಾರ್ಮಿಕರ ಪೈಕಿ ಉತ್ತರ ಪ್ರದೇಶದ 8 ಮಂದಿ ಕಾರ್ಮಿಕರನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇಂದು ತಮ್ಮ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿದ್ದಾರೆ.

ಪ್ರತಿಯೊಬ್ಬ ಕಾರ್ಮಿಕನ ಆರೋಗ್ಯ ಮತ್ತು ಯೋಗಕ್ಷೇಮವನ್ನುವಿಚಾರಿಸಿದ ಅವರು, ಕಾರ್ಮಿಕರ ಕುಟುಂಬದವರ ಬಗ್ಗೆಯೂ ಕೇಳಿದರು. ಅಲ್ಲದೆ, ಕಾರ್ಮಿಕರಿಗೆ ಶಾಲು ಮತ್ತು ಉಡುಗೊರೆಗಳನ್ನು ನೀಡುವ ಮೂಲಕ ಧೈರ್ಯ ತುಂಬಿದರು.

ಶ್ರಾವಸ್ತಿ ಜಿಲ್ಲೆಯವರಾದ ಅಂಕಿತ್‌, ರಾಮ್‌ ಮಿಲನ್‌, ಸತ್ಯದೇವ, ಸಂತೋಷ್‌, ಜೈ ಪ್ರಕಾಶ್‌ ಮತ್ತು ರಾಮ ಸುಂದರ್‌ ಹಾಗೂ ಲಖೀಂಪುರ ಖೇರಿಯ ಮಂಜಿತ್‌, ಮಿರ್ಜಾಪುರದ ಅಖಿಲೇಶ್‌ ಕುಮಾರ್‌ ಸಿಎಂ ಭೇಟಿ ಮಾಡಿದ ಕಾರ್ಮಿಕರಾಗಿದ್ದಾರೆ.

ನವೆಂಬರ್‌ 12 ರಂದು ಸುರಂಗ ಮಾರ್ಗದ ಒಂದು ಭಾಗ ಕುಸಿದ ಪರಿಣಾಮ ಸುಮಾರು 41 ಕಾರ್ಮಿಕರು ಸುರಂಗದೊಳಗೆ ಸಿಲುಕಿದ್ದರು. ಸುಮಾರು 17 ದಿನಗಳ ಕಾರ್ಯಾಚರಣೆಯ ನಂತರ ಕಾರ್ಮಿಕರನ್ನು ರಕ್ಷಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!