ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಳಿಗಾಲದ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ಲೋಕಸಭೆಯ ಪ್ರೇಕ್ಷಕರ ಗ್ಯಾಲರಿಯಿಂದ ಸಂಸದರು ಕಲಾಪ ನಡೆಸುತ್ತಿದ್ದ ಜಾಗಕ್ಕೆ ಜಿಗಿದು ಆತಂಕ ಸೃಷ್ಟಿಸಿದ್ದಾರೆ.
ಈ ಬಗ್ಗೆ ಸಭಾಧ್ಯಕ್ಷ ಪೀಠದಲ್ಲಿದ್ದ ಬಿಜೆಪಿ ಸಂಸದ ರಾಜೇಂದ್ರ ಅಗರ್ವಾಲ್ ಮಾತನಾಡಿದ್ದಾರೆ.
ಮೊದಲ ವ್ಯಕ್ತಿ ಕೆಳಗೆ ಬಿದ್ದಾಗ, ಮಿಸ್ ಆಗಿ ಬಿದ್ದಿದ್ದಾರೆ ಎಂದುಕೊಂಡೆವು ಆದರೆ ಎರಡನೇ ವ್ಯಕ್ತಿಯೂ ಅದೇ ರೀತಿ ಬಿದ್ದಾಗ ನಾವೆಲ್ಲರೂ ಎಚ್ಚರಗೊಂಡೆವು. ಬೂಟುಗಳನ್ನು ಆ ವ್ಯಕ್ತಿ ತೆಗೆಯಲು ಯತ್ನಿಸಿದ. ಆದರೆ ಆತ ಬಗ್ಗಿ ಹೊಗೆಯನ್ನು ಸ್ಪ್ರೇ ಮಾಡಿದ್ದ. ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.
ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ, ಸಭಾಧ್ಯಕ್ಷರು ಹಾಗೂ ಉನ್ನತ ಸ್ಥಾನದಲ್ಲಿರುವವರು ಯಾವ ವಿರ್ಧಾರ ಮಾಡುತ್ತಾರೆ ನೋಡಬೇಕಿದೆ ಎಂದಿದ್ದಾರೆ. ಈ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಸದನಕ್ಕೆ ಆಗಮಿಸಿದ್ದರು.
#WATCH | Security breach in Lok Sabha | BJP MP Rajendra Agarwal, who was presiding over the Chair of Speaker, says “There is a loophole for sure. When the first person came down, we thought he might have fallen but when the second person started coming down, all of us became… pic.twitter.com/J8C9VmT1j2
— ANI (@ANI) December 13, 2023