ಹೊಸದಿಗಂತ ವರದಿ ವಿಜಯನಗರ:
ಕಾಡಿನಿಂದ ವಿಜಯನಗರದ ಹೊಸಪೇಟೆ ಸಿಟಿಗೆ ಜಾಂಬವಂತ ಎಂಟ್ರಿ ಕೊಟ್ಟಿದ್ದಾನೆ.
ಸಿಟಿ ಮಧ್ಯದ ಸಿರಸನಕಲ್ಲು ಏರಿಯಾಕೆ ಬಂದು ಎಲ್ಲೆಡೆ ರಾಜಾರೋಷವಾಗಿ ಕರಡಿ ಎಲ್ಲೆಡೆ ಓಡಾಡಿದೆ. ಇದರಿಂದ ಭಯಬಿದ್ದ ಜನ ಕೂಗಾಡಿ, ಕಿರುಚಾಡಿದ್ದಾರೆ.
ಜನರ ಕೂಗಾಟಕ್ಕೆ ಭಯಬಿದ್ದ ಕರಡಿ ಠಕ್ಕನೆ ಮರದ ಮೇಲೆ ಏರಿ ಕುಳಿತಿದೆ, ತಕ್ಷಣವೇ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಕರಡಿಯನ್ನು ಕೆಳಕ್ಕೆ ಇಳಿಸುವ ಪ್ರಯತ್ನ ಮಾಡಿದ್ದಾರೆ.
ಆದರೆ ಮಾನವನ ಭಯಕ್ಕೆ ಕರಡಿ ಕೆಳಗೆ ಇಳಿಯಲು ನಿರಾಕರಿಸಿದೆ. ನಿರಂತರ ಕಾರ್ಯಾಚರಣೆ ಹಾಗೂ ಅರವಳಿಗೆ ನೀಡಿ ಕರಡಿಯನ್ನು ಸೆರೆಹಿಡಿಯಲಾಗಿದೆ. ಬೆಳಗಿನ ಜಾವ ಕರಡಿಯನ್ನು ಕಾಡಿಗೆ ಬಿಡಲಾಗಿದೆ.