ಸಚಿವರು ಫ್ಲೈಟ್‌ಲ್ಲಿ ಓಡಾಡ್ತಾರೆ, ಬಡಮಕ್ಕಳು ಜೆಸಿಬಿಲಿ ಶಾಲೆಗೆ ಹೋಗ್ತಾರೆ, ಇದೇನಾ ನಿಮ್ ಸಮಾಜವಾದ? ಆರ್. ಅಶೋಕ್ ಕಿಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಎಂ ಸಿದ್ದರಾಮಯ್ಯ, ಸಚಿವ ಕೃಷ್ಣಭೈರೇಗೌಡ, ಜಮೀರ್ ಅಹಮದ್ ಐಷಾರಾಮಿ ಜೆಟ್‌ನಲ್ಲಿಪ್ರಯಾಣಿಸ್ತಾರೆ, ಇತ್ತ ರಾಜ್ಯದ ಎಷ್ಟೋ ಮಕ್ಕಳು ಜೆಸಿಬಿಯಲ್ಲಿ ಶಾಲೆಗೆ ಹೋಗ್ತಾರೆ. ಇದೇನಾ ನಿಮ್ಮ ಸಮಾಜವಾದ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಪ್ರಶ್ನೆ ಮಾಡಿದ್ದಾರೆ.

ಒಂದು ರಾಜ್ಯದ ಸಿಎಂ ಹಾಗೂ ಸಚಿವರುಗಳಿಗೆ ಈ ರೀತಿ ದವಲತ್ತಿನ ನಡೆ ಬೇಕಿತ್ತಾ? ರೈತರು ಬರ ಪರಿಹಾರ ಸಿಗದೆ ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ. ಜೆಸಿಬಿಯಲ್ಲಿ ಮಕ್ಕಳು ಶಾಲೆಗೆ ಹೋಗ್ತಿದ್ದಾರೆ. ಇಷ್ಟೆಲ್ಲಾ ಸಮಸ್ಯೆ ಇರುವಾಗ ಐಷಾರಾಮಿ ವಿಡಿಯೋ ಹಂಚಿಕೊಳ್ಳೋದು ಸರಿಯಾ ಎಂದು ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!