ಹೊಸದಿಗಂತ ವರದಿ,ಗದಗ :
ಹಾಳುಬಿದ್ದ ಮನೆಯಲ್ಲಿ ಪಾಪಿಗಳು ಇಟ್ಟು ಹೋಗಿದ್ದ ಹಸುಗೂಸನ್ನು ಬೀದಿ ನಾಯಿಗಳು ತಿಂದು ಹಾಕಿದ ಅಮಾನವೀಯ ಘಟನೆ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ದೇವಿಹಾಳ ಗ್ರಾಮದಲ್ಲಿ ಸೋಮವಾರ ಜರುಗಿದೆ.
ಈ ಬಗ್ಗೆ ಹಲವಾರು ಅನುಮಾನಗಳು ಮೂಡಿದ್ದು ಅನೈತಿಕ ಸಂಬಂಧದ ಹಿನ್ನೆಲೆ ಹುಟ್ಟಿದ್ದ ಮಗುವನ್ನು ಬಿಸಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಬಿಸಾಡಿದ ಮಗವನ್ನು ನಾಯಿಗಳು ಅರ್ಧಬಂರ್ದ ತಿಂದು ಹಾಕಿzದ್ದು, ಮಗುವಿನ ವಾರಸುದಾರರನ್ನ ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ. ಈ ಕುರಿತು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ