ಹೊಸದಿಗಂತ ವರದಿ ಬಾಗಲಕೋಟೆ :
ನಡೆದಾಡುವ ದೇವರು ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಯವರ ಮೊದಲನೇ ವರ್ಷದ ಪುಣ್ಯ ಸ್ಮರಣೆಯ ಪ್ರಯುಕ್ತ ತಾಲೂಕಿನ ಶೀಗಿಕೇರಿ ಗ್ರಾಮದ 1ನೇಯ ಮತ್ತು 2ನೇಯ ಅಂಗನವಾಡಿ ಕೇಂದ್ರದ ಮುದ್ದು ಮಕ್ಕಳಿಗೆ ಹೊಸ ಕುರ್ಚಿಗಳನ್ನು ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಅಧ್ತಕ್ಷೆ ರಕ್ಷಿತಾ ಭರತಕುಮಾರ ಈಟಿ ಅವರು ನೀಡಿದರು.
ಕಾರ್ಯಕ್ರಮದಲ್ಲಿ ಬಾಗಲಕೋಟೆ ಮಹಿಳಾ ಬ್ಲಾಕ್ ಅಧ್ಯಕ್ಷೆ ರೇಣುಕಾ ನ್ಯಾಮಗೌಡರ, ಸಾವತ್ರಿ ಗಾಜಿ ,ಹಣಮವ್ವ ಕುಳಕೇರಿ, ಮಂಜವ್ವಾ ಕಾಗಲಗೊಬ್ಬ, ರೇಣವ್ವಾ ಅರಕೇರಿ, ಶಿಲ್ಪಾ ,ಯಲ್ಲಪ್ಪಾ ಕಾತರಕಿ,ಮಾರುತಿ ತೆಗ್ಗಿ, ಮಂಜುನಾಥ ವಾಲಿಕಾರ, ಶಿವರಾಯಪ್ಪ ಕಾಗಲಗೊಂಬ ,ದುರ್ಗಪ್ಪಾ ಮಾದರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು