ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವಿನ ಘರ್ಷಣೆಯಲ್ಲಿ ಪೊಲೀಸರು ಸೇರಿದಂತೆ ಹಲವರು ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ಕೂಚ್ ಬಿಹಾರ್ ಜಿಲ್ಲೆಯಲ್ಲಿ ನಡೆದಿದೆ. ಲೋಕಸಭೆ ಚುನಾವಣೆ ಘೋಷಣೆಯಾದ ನಂತರ ಬಂಗಾಳದಲ್ಲಿ ಬೆಳಕಿಗೆ ಬಂದ ಮೊದಲ ಹಿಂಸಾಚಾರದ ಘಟನೆ ಇದಾಗಿದೆ. ಕೂಚ್ ಬೆಹಾರ್ನ ದಿನಾಟಾದಲ್ಲಿ ಕೇಂದ್ರ ಸಚಿವ ನಿಶಿತ್ ಪ್ರಮಾಣಿಕ್ ಮತ್ತು ಉಪಮುಖ್ಯಮಂತ್ರಿ ಉದಯನ್ ಗುಹಾ ಅವರ ಬೆಂಬಲಿಗರ ನಡುವೆ ತೀವ್ರ ಮಾರಾಮಾರಿ ನಡೆದಿದೆ.
ಈ ಘಟನೆಯಲ್ಲಿ ಎಸ್ಡಿಪಿಒ ಅವರ ತಲೆಗೆ ಗಾಯವಾಗಿದೆ. ಘಟನೆ ನಂತರ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು. ಮಾಹಿತಿ ಪ್ರಕಾರ ಉದಯನ್ ಗುಹಾ ಹುಟ್ಟುಹಬ್ಬದ ಕಾರ್ಯಕ್ರಮ ನಡೆಯುತ್ತಿತ್ತು ಎನ್ನಲಾಗಿದೆ, ಈ ವೇಳೆ ನಿಶಿತ್ ಪ್ರಮಾಣಿಕ್ ಅವರ ಕಾರವಾನ್ ಅಲ್ಲಿಯೇ ಸಾಗುತ್ತಿತ್ತು. ಈ ವೇಳೆ ಬೆಂಬಲಿಗರು ಪರಸ್ಪರ ಹಲ್ಲೆ ನಡೆಸಿದ್ದಾರೆ.
ಈ ವೇಳೆ ನಿಶಿತ್ ಕೂಡ ಕಾರಿನಿಂದ ಇಳಿದಿದ್ದು, ಉದಯನ್ ಕೂಡ ಹೊರಗೆ ಬಂದಿದ್ದರು. ಈ ಘಟನೆಯ ನಂತರ ಟಿಎಂಸಿ 24 ಗಂಟೆಗಳ ದಿನ್ಹತಾ ಬಂದ್ ಘೋಷಿಸಿದೆ. ಯಾವುದೇ ಪ್ರಚೋದನೆ ಇಲ್ಲದೆ ತಮ್ಮ ಬೆಂಬಲಿಗರ ಮೇಲೆ ಉದಯನ್ ಗುಹಾ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.