ಕಾಂಗ್ರೆಸ್‌ನ ಎರಡನೇ ಪಟ್ಟಿ ರಿಲೀಸ್: ಜಾರಕಿಹೊಳಿ ಪುತ್ರಿ, ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನಿಗೆ ಟಿಕೆಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:
 
ಲೋಕಸಭಾ ಚುನಾವಣೆಗೆ ರಾಜ್ಯ ಕಾಂಗ್ರೆಸ್‌ನ 2ನೇ ಪಟ್ಟಿ ಬಿಡುಗಡೆಯಾಗಿದೆ. ಒಟ್ಟು 17 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಅಂತಿಮ ಮಾಡಲಾಗಿದೆ. ಉತ್ತರ ಕನ್ನಡದಿಂದ ಅಂಜಲಿ ನಿಂಬಾಳ್ಕರ್‌ಗೆ ಟಿಕೆಟ್‌ ನೀಡಲಾಗಿದ್ದು, ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸೌಮ್ಯ ರೆಡ್ಡಿ ಸ್ಪರ್ಧೆ ಮಾಡಲಿದ್ದಾರೆ.

ಎಐಸಿಸಿ ಪ್ರಕಟಿಸಿದ ಮೂರನೇ ಪಟ್ಟಿ ಇದಾಗಿದ್ದು, ರಾಜ್ಯ ಕಾಂಗ್ರೆಸ್‌ನ 2ನೇ ಪಟ್ಟಿಯಾಗಿದೆ.ಒಟ್ಟು 57 ಹೆಸರುಗಳನ್ನು ಎಐಸಿಸಿ ಪ್ರಕಟಿಸಿದೆ. ಕರ್ನಾಟಕ ಮಾತ್ರವಲ್ಲದೆ, ಅರುಣಾಚಲ ಪ್ರದೇಶ, ಗುಜರಾತ್‌, ಮಹಾರಾಷ್ಟ್ರ, ರಾಜಸ್ಥಾನ, ತೆಲಂಗಾಣ, ಪಶ್ಚಿಮ ಬಂಗಾಳ ಹಾಗೂ ಪುದುಚೇರಿಯ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.

ಚಿಕ್ಕೋಡಿ (ಸಾಮಾನ್ಯ ಕ್ಷೇತ್ರ): ಪ್ರಿಯಾಂಕ ಜಾರಕಿಹೊಳಿ, ಸಚಿವ ಸತೀಶ್ ಜಾರಕಿಹೊಳಿ ಪುತ್ರಿ

ಬೆಳಗಾವಿ (ಸಾಮಾನ್ಯ ಕ್ಷೇತ್ರ): ಮೃಣಾಲ್ ಹೆಬ್ಬಾಳ್ಕರ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ

ಬಾಗಲಕೋಟೆ (ಸಾಮಾನ್ಯ ಕ್ಷೇತ್ರ): ಸಂಯುಕ್ತ ಪಾಟೀಲ್, ಸಚಿವ ಶಿವಾನಂದ ಪಾಟೀಲ್ ಪುತ್ರಿ

ಕಲಬುರಗಿ (ಪರಿಶಿಷ್ಟ ಜಾತಿ ಮೀಸಲು): ಡಾ. ರಾಧಾಕೃಷ್ಣ ದೊಡ್ಡಮನಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ

ರಾಯಚೂರು (ಪರಿಶಿಷ್ಟ ಪಂಗಡ ಮೀಸಲು): ಕುಮಾರ್ ನಾಯ್ಕ್, ನಿವೃತ್ತ ಐಎಎಸ್

ಬೀದರ್ (ಸಾಮಾನ್ಯ ಕ್ಷೇತ್ರ): ಸಾಗರ್ ಖಂಡ್ರೆ, ಸಚಿವ ಈಶ್ವರ್ ಖಂಡ್ರೆ ಪುತ್ರ

ಕೊಪ್ಪಳ (ಸಾಮಾನ್ಯ ಕ್ಷೇತ್ರ): ರಾಜಶೇಖರ್ ಹಿಟ್ನಾಳ್, ಶಾಸಕ ರಾಘವೇಂದ್ರ ಹಿಟ್ನಾಳ್ ಸಹೋದರ

ಧಾರವಾಡ (ಸಾಮಾನ್ಯ ಕ್ಷೇತ್ರ): ವಿನೋದ್ ಅಸೂಟಿ

ದಾವಣಗೆರೆ (ಸಾಮಾನ್ಯ ಕ್ಷೇತ್ರ): ಪ್ರಭಾವತಿ ಮಲ್ಲಿಕಾರ್ಜುನ್, ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಪತ್ನಿ

ಉಡುಪಿ-ಚಿಕ್ಕಮಗಳೂರು (ಸಾಮಾನ್ಯ ಕ್ಷೇತ್ರ) : ಜಯಪ್ರಕಾಶ್ ಹೆಗ್ಡೆ, ಮಾಜಿ ಸಂಸದ

ದಕ್ಷಿಣ ಕನ್ನಡ (ಸಾಮಾನ್ಯ ಕ್ಷೇತ್ರ):ಪದ್ಮರಾಜ್, ವಕೀಲ

ಮೈಸೂರು-ಕೊಡಗು (ಸಾಮಾನ್ಯ ಕ್ಷೇತ್ರ): ಎಂ. ಲಕ್ಷ್ಮಣ್, ಕೆಪಿಸಿಸಿ ವಕ್ತಾರ

ಬೆಂಗಳೂರು ಉತ್ತರ (ಸಾಮಾನ್ಯ ಕ್ಷೇತ್ರ): ಪ್ರೊ.‌ರಾಜೀವ್ ಗೌಡ, ಯೋಜನಾ ಆಯೋಗದ ಉಪಾಧ್ಯಕ್ಷ

ಬೆಂಗಳೂರು ಕೇಂದ್ರ (ಸಾಮಾನ್ಯ): ಮನ್ಸೂರ್ ಖಾನ್, ಕೇಂದ್ರ ಮಾಜಿ ಸಚಿವ ರೆಹಮಾನ್ ಖಾನ್ ಪುತ್ರ

ಬೆಂಗಳೂರು ದಕ್ಷಿಣ (ಸಾಮಾನ್ಯ): ಸೌಮ್ಯ ರೆಡ್ಡಿ, ಸಚಿವ ರಾಮಲಿಂಗಾರೆಡ್ಡಿ ಪುತ್ರಿ

ಉತ್ತರ ಕನ್ನಡ (ಸಾಮಾನ್ಯ ಕ್ಷೇತ್ರ): ಅಂಜಲಿ‌ ನಿಂಬಾಳ್ಕರ್, ಮಾಜಿ ಶಾಸಕಿ

ಚಿತ್ರದುರ್ಗ (ಪರಿಶಿಷ್ಟ ಜಾತಿ ಮೀಸಲು): ಬಿಎನ್ ಚಂದ್ರಪ್ಪ, ಮಾಜಿ ಸಂಸದ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

2 COMMENTS

  1. ಕಾಂಗ್ರೆಸ್ ಲೋಕಸಭಾ ಟಿಕೆಟ್

    😂ಖಂಡ್ರೆ ಮಗಾ
    ರೆಡ್ಡಿ ಮಗಳು
    ಕುಕ್ಕರ್ ಮಗಾ
    ಬಂಡೆ ಬ್ರದರ್ರು
    ಖರ್ಗೆ ಅಳಿಯ
    ನಾಗೇಂದ್ರ ತಮ್ಮ
    ಮಧು ಅವರ ಅಕ್ಕಾ
    ಜಾರಕಿಹೊಳಿ ಮಗಳು
    ಪುಟ್ಟ ಸ್ವಾಮಿ ಮೊಮ್ಮಗ
    ಮಲ್ಲಿಕಾರ್ಜುನ್ ಹೆಂಡತಿ
    ಮಲ್ಲಿಕಾರ್ಜುನನ ಹೆಂಡತಿ
    ಮಧು ಬಂಗಾರಪ್ಪನ ತಂಗಿ
    ರಾಘವೇಂದ್ರ ಹಿಟ್ನಾಳ್ ತಮ್ಮ
    ಶಿವಾನಂದ ಪಾಟೀಲ ಮಗಳು😂

    ಕಾರ್ಯಕರ್ತರಿಗೆ ಗುಲಾಮಗಿರಿ🤣

LEAVE A REPLY

Please enter your comment!
Please enter your name here

error: Content is protected !!