ಹೊಸದಿಗಂತ ಡಿಜಿಟಲ್ ಡೆಸ್ಕ್:
ಆನೆ ತುಳಿತಕ್ಕೆ ಪುತ್ತುಪ್ಪಲ್ಲಿ ಅರವಿಂದ್ ಎಂಬ 26 ವರ್ಷದ ಮಾವುತ ಸಾವನ್ನಪ್ಪಿರುವ ದಾರುಣ ಘಟನೆ ಕೇರಳದ ಟಿವಿ ಪುರಂ ಶ್ರೀರಾಮ ಸ್ವಾಮಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಂಡುಬಂದಿದೆ.
ಬುಧವಾರ (ಏ.03) ರಾತ್ರಿ 9:00 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ದೇವಸ್ಥಾನದ ಆವರಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಭಯಾನಕ ಘಟನೆಯ ದೃಶ್ಯಾವಳಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕುಂಜುಲಕ್ಷ್ಮಿ ಎಂದು ಕರೆಯಲ್ಪಡುವ ಈ ಆನೆಯನ್ನು ದೇವಾಲಯದ ಸಮಾರಂಭಕ್ಕೆ ತಕ್ಕಂತೆ ಅಲಂಕರಿಸಲಾಗಿತ್ತು. ಶಾಂತವಾಗಿದ್ದ ಆನೆ ಏಕಾಏಕಿ ಓಡಿ ಬಂದು ಆನೆಯ ಪಾದದ ಬಳಿ ನಿಂತಿದ್ದ ಮಾವುತ ಅರವಿಂದನನ್ನು ತುಳಿದು ಹಾಕಿದೆ. ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಕರೆದೊಯ್ದರೂ, ವೈಕಂ ತಾಲೂಕು ಆಸ್ಪತ್ರೆ ವೈದ್ಯರು ಅರವಿಂದ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
Mahout trampled to death by elephant during temple ritual in Keralahttps://t.co/Y2tOgVkLxS pic.twitter.com/NiwYl9ofLs
— JΛYΣƧΉ (@baldwhiner) April 4, 2024