ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆಗೆ ಹೊರಟಿದ್ದ ಕ್ರೂಷರ್ ಖಾಸಗಿ ಸ್ಲೀಪರ್ ಬಸ್ಸಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಘಟನೆ ಮಹಾರಾಷ್ಟ್ರದ ಜತ್ತ ಸಮೀಪದ ನಾಗಾಸಪಾಟಾ ಎಂಬಲ್ಲಿ ನಡೆದಿದೆ.
ಅಪಘಾತದಲ್ಲಿ ಕ್ರೂಷರ್ನಲ್ಲಿದ್ದ ನಾಲ್ವರು ಮೃತಪಟ್ಟಿದ್ದು, 10 ಜನರಿಗೆ ಗಾಯವಾಗಿದೆ. ಮೃತಪಟ್ಟ ನಾಲ್ವರು ಕರ್ನಾಟಕದವರಾಗಿದ್ದಾರೆ.
ನಿನ್ನೆ ರಾತ್ರಿ ನಡೆದ ಘಟನೆ ಇದಾಗಿದೆ. ಮೃತ ನಾಲ್ವರಲ್ಲಿ ಮೂವರು ಬಾಗಲಕೋಟೆ ಜಿಲ್ಲೆಯವರು. ಒಬ್ಬರು ವಿಜಯಪುರ ಜಿಲ್ಲೆಯವರು.
ಜಮಖಂಡಿ ತಾಲ್ಲೂಕಿನ ರೆಹಮತ್ಪೂರ ಗ್ರಾಮದ ಭಾಗ್ಯಶ್ರೀ ಅಂಬೇಕರ್ (17), ಅಡಿಹುಡಿ ಗ್ರಾಮದ ಉಜ್ವಲಾ ಶಿಂಧೆ (21), ಲೋಕಾಪುರ ನಿವೇದಿತಾ (20) ವಿಜಯಪುರ ಜಿಲ್ಲೆ ಕಣಮಡಿ ಗ್ರಾಮದ ಅನುಸೂಯಾ ಮೃತರೆಂದು ಗುರುತಿಸಲಾಗಿದೆ.
ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಕ್ಕಿಯ ತೀವ್ರತೆಗೆ ಕ್ರೂಸರ್ ಸಂಪೂರ್ಣ ನುಜ್ಜುಗುಜ್ಜಾಗಿತ್ತು. ಅಪಘಾತದ ತೀವ್ರತೆಗೆ ತಕ್ಷಣವೇ ಕ್ರೂಸರ್ಗೆ ಬೆಂಕಿಹೊತ್ತಿಕೊಂಡಿತ್ತು. ಸ್ಥಳದಲ್ಲಿದ್ದವರು ತಕ್ಷಣವೇ ರಕ್ಷಣೆಗೆ ಧಾವಿಸಿದ್ದಾರೆ. ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.