ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಮಲತಾ ಅಂಬರೀಶ್ ಜೆಡಿಎಸ್ನವರ ವರ್ತನೆ ಬೇಸರ ತಂದಿದೆ, ಪ್ರಚಾರಕ್ಕೂ ಕರೆದಿಲ್ಲ ಎಂದು ನೀಡಿದ ಹೇಳಿಕೆಗೆ ಎಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ನಾನೇ ಸುಮಲತಾ ಮನೆಗೆ ಹೋಗಿ ಅವರ ಸಹಕಾರ ಕೇಳಿದ್ದೇನೆ. ಅದಕ್ಕಿಂತ ನಾನು ಏನು ಮಾಡಲು ಸಾಧ್ಯ. ಅಂಬರೀಶ್ ಅಭಿಮಾನಿಗಳು ಒಳಗೊಂಡಂತೆ ನನಗೆ ಸಹಾಯ ಮಾಡಿದ್ದಾರೆ. ಮೋದಿ ಅವರ ಕಾರ್ಯಕ್ರಮದ ವೇದಿಕೆಯಲ್ಲಿ ಸಾಧ್ಯವಾದರೆ ಎರಡು ದಿನ ಪ್ರಚಾರಕ್ಕೆ ಬನ್ನಿ ಅಕ್ಕ ಎಂದಿದ್ದೆ.
ಮಾಜಿ ಸಚಿವ ಅಶೋಕ್ ಅವರು ಸಹ ನಾನು ಕರೆದಾಗ ಇದ್ದರು. ಅಶೋಕ್ ಸಹ ಮಂಡ್ಯಗೆ ಬಂದು ಪ್ರಚಾರ ಮಾಡಿ ಎಂದಿದ್ದೆ ಇನ್ನು ಯಾವ ರೀತಿ ಕರೆಯಬೇಕು ಗೊತ್ತಿಲ್ಲ ಎಂದಿದ್ದಾರೆ.