ಹೊಸದಿಗಂತ ಡಿಜಿಟಲ್ ಡೆಸ್ಕ್:
ದೊಡ್ಡಬಳ್ಳಾಪುರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮೂರು ವರ್ಷದ ಕಂದಮ್ಮ ಪ್ರಾಣಕಳೆದುಕೊಂಡಿದೆ.
ತಂದೆ ಆಂಜಿನೇಯ-ಮಮತಾ ಪುತ್ರ ಮೂರು ವರ್ಷದ ಧನ್ವಿತ್ ಮೃತಪಟ್ಟ ಕಂದಮ್ಮ. ದೊಡ್ಡಬಳ್ಳಾಪುರ ತಾಲೂಕಿನ ಕೆಸ್ತೂರು ಗೇಟ್ ಬಳಿ ಅಪಘಾತ ಸಂಭವಿಸಿದೆ. ಲಾರಿಯೊಂದು ಬೈಕ್ಗೆ ಡಿಕ್ಕಿಯಾಗಿದ್ದು, ಒಂದು ಕಿ.ಮೀ. ದೂರ ಬೈಕ್ನ್ನು ಎಳೆದುಕೊಂಡು ಹೋಗಿದೆ.
ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.