ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ರಾಹುಲ್ ಗಾಂಧಿ ಅವರನ್ನು ಸಿದ್ದರಾಮಯ್ಯ ಅಭಿನಂದಿಸಿದರು.
ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ನಮ್ಮ ಪ್ರೀತಿಯ ನಾಯಕ ರಾಹುಲ್ ಅವರಿಗೆ ಅಭಿನಂದನೆಗಳು. ಪ್ರತೀಕಾರದ ರಾಜಕೀಯ ಮತ್ತು ನಿರಂತರ ವೈಯಕ್ತಿಕ ಕಿರುಕುಳದ ವಿರುದ್ಧ ದಣಿವರಿಯದ ಹೋರಾಟದ ಮೂಲಕ ದೇಶವನ್ನು ಸರ್ವಾಧಿಕಾರಿ ಆಡಳಿತದಿಂದ ರಕ್ಷಿಸುವ ಮೂಲಕ ರಾಹುಲ್ ಗಾಂಧಿ ಈ ಮಟ್ಟವನ್ನು ಸಾಧಿಸಿದ್ದಾರೆ.
ರಾಹುಲ್ ಗಾಂಧಿಯವರ ಸೈದ್ಧಾಂತಿಕ ಬದ್ಧತೆ, ದೂರದೃಷ್ಟಿ ಮತ್ತು ಜನಪರ ಕಾಳಜಿಯು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿ ಆಡಳಿತ ಪಕ್ಷಕ್ಕೆ ಸಿಂಹ ಸ್ವಪ್ನರಾಗಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.