ಹೊಸದಿಗಂತ ವರದಿ,ಕಾರವಾರ:
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಗೆ ಮೊದಲ ಬಲಿಯಾಗಿದ್ದು, ಧಾರಾಕಾರ ಮಳೆಗೆ ಅಂಗಡಿಯ ಮಣ್ಣಿನ ಗೋಡೆ ಕುಸಿದು ವೃದ್ಧೆಯೋರ್ವಳು ಸಾವನ್ನಪ್ಪಿದ ಘಟನೆ ಇಲ್ಲಿನ ಆರವ ಗ್ರಾಮದ ತೋರ್ಲೇ ಭಾಗದಲ್ಲಿ ಶುಕ್ರವಾರ ಸಂಜೆ ನಡೆದಿದೆ.
79 ವರ್ಷದ ರುಕ್ಮಾ ಗುಲಾಬಿ ಮಾಳ್ಸೇಕರ ಮೃತಪಟ್ಟ ವೃದ್ಧೆಯಾಗಿದ್ದು, ಇವರು ತಮ್ಮ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಮಳೆ ಸುರಿಯುತ್ತಿದ್ದ ಸಂದರ್ಭದಲ್ಲಿ ಬಾಗಿಲು ಮುಚ್ಚಿದ್ದ ಹಳೇ ಅಂಗಡಿ ಬಳಿ ನಿಂತಿದ್ದಾಗ ಈ ಅಂಗಡಿಯ ಮಣ್ಣಿನ ಗೋಡೆ ಅವರ ಮೇಲೆ ಕುಸಿದ ಪರಿಣಾಮ ವೃದ್ಧೆ ಸಾವನ್ನಪ್ಪಿದ್ದಾಳೆ.