ಹೊಸದಿಗಂತ ವಿಜಯಪುರ:
ಕೆಲವೇ ದಿನಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವೇ ಬಿಳಲಿದೆ. ಗ್ಯಾರಂಟಿ ಕೊಟ್ಟು ಸರ್ಕಾರ ದಿವಾಳಿ ಆಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ದೂರಿದರು.
ಸಿಎಂ, ಡಿಸಿಎಂ ಕುರ್ಚಿಗಾಗಿ ಕಚ್ಚಾಟದ ಕುರಿತು ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಅದು ಅವರ ಪಕ್ಷದ ಆಂತರಿಕ ವಿಚಾರ ಎಂದರು.
ಎಲ್ಲ ರೀತಿ ಬೆಲೆ ಏರಿಸ್ತಿದ್ದಾರೆ. ಈ ಸರ್ಕಾರ ಜನರಿಗೆ ಭಾರವಾಗಿದೆ. ಹಾಗಾಗಿ ಬೇಗ ಸರ್ಕಾರ ಬಿಳಲಿ ಅಂತ ಆಶಿಸುತ್ತೇನೆ ಎಂದರು.
ಪಠ್ಯ ಪುಸ್ತಕದಲ್ಲಿ ವೀರಶೈವ ಹೆಸರು ತೆಗೆದ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ನವರಿಗೆ ವೀರಶೈವ ಲಿಂಗಾಯತ ಪದ ಅಂದರೆ ಅಲರ್ಜಿ. ಈಗಲ್ಲ, ಯಾವಾಗಲೂ ಅವರಿಗೆ ವೀರಶೈವ ಲಿಂಗಾಯತರಂದ್ರೆ ಆಗಲ್ಲ. ಅವರಿಗೆ ಟಿಪ್ಪು ಸುಲ್ತಾನ ಆಗಿ ಬರ್ತಾನೆ. ವೀರಶೈವ ಲಿಂಗಾಯತ ಅಂದರೆ ಅಲರ್ಜಿ ಇದೆ ಎಂದರು.
ಆರ್. ಅಶೋಕ್ ವಿಪಕ್ಷ ನಾಯಕ ಬದಲಾವಣೆ ವಿಷಯದ ಕುರಿತು ಪ್ರತಿಕ್ರಿಯಿಸಿ, ಇದು ನಮ್ಮ ಪಕ್ಷದ ಆಂತರಿಕ ವಿಚಾರ ಎಂದರು. ನೀವು ವಿಪಕ್ಷ ನಾಯಕನಾಗಲು ಬಯಸಿದ್ದಿರಿ ಎಂಬ ಪ್ರಶ್ನೆಗೆ, ನನ್ನನ್ನು ವಿರೋದ ಪಕ್ಷದ ನಾಯಕನನ್ನಾಗಿ ಮಾಡಬೇಕಲ್ಲ ? ಅವರು ಮಾಡೋದಿಲ್ಲ. ಯಾರನ್ನ ಬೇಕಾದರು ವಿರೋದ ಪಕ್ಷದ ನಾಯಕನ್ನ ಮಾಡಲಿ ಎಂದರು.
ಇವರ ಹೇಳಿಕೆಯಲ್ಲಿ ಕೇಂದ್ರ ಸರ್ಕಾರ ಬಿಳಲಿದೆ ಎನ್ನುವ ಬದಲಾಗಿ ರಾಜ್ಯ ಸರ್ಕಾರ ಎಂದು ಭಾಸವಾಗುತ್ತದೆ.