ಹೊಸದಿಗಂತ ಕಾರವಾರ:
ವ್ಯಾಪಕ ಮಳೆಗೆ ಉತ್ತರ ಕನ್ನಡ ತತ್ತರಿಸುತ್ತಿದ್ದು ಇಂದು ಬೆಳಗಿನ ಜಾವ 2 ಗಂಟೆಗೆ ಶಿರಸಿ ಕುಮಟಾ ರಸ್ತೆ ದೇವಿಮನೆ ಮತ್ತು ರಾಗಿಹೋಸಳ್ಳಿ ಮಧ್ಯ ಗುಡ್ಡ ಕುಸಿದು ರಸ್ತೆ ಸಂಪೂರ್ಣ ಬಂದ್ ಆಗಿದೆ.
ಇದರಿಂದಾಗಿ ಸಂಚಾರ ವ್ಯತ್ಯಯವಾಗಿದೆ ಜೆ. ಸಿ. ಬಿ ಯಿಂದ್ ಮಣ್ಣನ್ನು ತೆಗೆಯುವ ಕಾರ್ಯಾಚರಣೆ ನಡೆಯುತ್ತಿದೆ.
ಈ ಮಧ್ಯೆ ಭಾರಿ ಮಳೆಯ ಹಿನ್ನೆಲೆಯಲ್ಲಿ ಮಂಗಳವಾರ ಸಹ ಜಿಲ್ಲಾಡಳಿತ ಹಳಿಯಾಳ, ಮುಂಡಗೋಡ ಹೊರತು ಪಡಿಸಿ ಎಲ್ಲ ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದೆ.