ದಿಗಂತ ವರದಿ ಅಂಕೋಲಾ :
ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ಗುರುವಾರ ದೆಹಲಿ ಹಾಗೂ ಬೆಂಗಳೂರಿನಿಂದ ರಾಷ್ಟ್ರೀಯ ಡಿಟೆಕ್ಟರ್ ಏಜನ್ಸಿಯ ತಜ್ಞರು ಕಾರ್ಯಾಚರಣೆ ಆರಂಭ ಮಾಡಿದ್ದು ಕೇರಳದ ಲಾರಿ ಇರುವಿಕೆ ಬಗ್ಗೆ ಮಧ್ಯಾಹ್ನದ ತನಕ ಯಾವುದೇ ನಿಖರ ಕುರುಹು ಸಿಕ್ಕಿಲ್ಲ.
ಅತಿ ಹೆಚ್ಚಿನ ಸಾಮರ್ಥ್ಯದ ಡ್ರೋಣ್ ಮೂಲಕ ಲಾರಿಯ ಮಾಹಿತಿ ಪಡೆಯುವ ಯತ್ನ ನಡೆದಿದೆ.
ಹ್ಯಾಲಿಕಾಫ್ಟರ್ ಮೂಲಕವೂ ಗಂಗಾವಳಿ ನದಿಯಲ್ಲಿ ಶೋಧ ಕಾರ್ಯ ನಡೆಸಲಾಗಿದೆ.
ಬೆಳಗಾವಿಯ ಗೋಕಾಕ್ ದಿಂದ ಬಂದಿರುವ ಭಾರೀ ಸಾಮರ್ಥ್ಯದ ಪೊಕ್ಲೆನ್ ಯಂತ್ರದ ಮೂಲಕ ನದಿಯಲ್ಲಿ ಮಣ್ಣು ಎತ್ತುವ ಕಾರ್ಯ ತೀವ್ರಗೊಳಿಸಲಾಗಿದೆ.