ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮ್ಮ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ಮೂಲಕ ಕೇರಳದ ವಯನಾಡಿನಲ್ಲಿ ಸಂಭವಿಸಿರುವ ಭೀಕರ ಭೂಕುಸಿತದ ಪರಿಹಾರ ಕಾರ್ಯಗಳಿಗೆ ಕೈಜೋಡಿಸುವಂತೆ ಕಾರ್ಪೊರೇಟ್ ಕಂಪನಿಗಳಿಗೆ ರಾಜ್ಯ ಸರ್ಕಾರ ಮನವಿ ಮಾಡಿದೆ.
ಕೇರಳವು ಭೂಕುಸಿತದ ಸಂತ್ರಸ್ಥರ ತಕ್ಷಣದ ಅಗತ್ಯಗಳನ್ನು ಪರಿಹರಿಸಲು ಹಣಕಾಸಿನ ನೆರವು, ಆಹಾರ ಸರಬರಾಜು, ಬಟ್ಟೆ ಮತ್ತು ಮೂಲಭೂತ ಪಡಿತರ ವಿತರಣೆಯ ಅವಶ್ಯಕತೆಯಿದೆ. ಇಂತಹ ವಿಪತ್ತಿನ ಸಂದರ್ಭದಲ್ಲಿ ಸಮಾಜದ ಎಲ್ಲಾ ವಲಯಗಳಿಂದ, ವಿಶೇಷವಾಗಿ ಕಾರ್ಪೊರೇಟ್ ಸಂಸ್ಥೆಗಳಿಂದ ಸಂಘಟಿತ ಮತ್ತು ಉದಾರ ನೆರವಿನ ಅಗತ್ಯವಿದೆ.
ಅಗತ್ಯದ ಸಮಯದಲ್ಲಿ ಖಾಸಗಿ ಕಂಪನಿಗಳು ಯಾವಾಗಲೂ ಆಧಾರ ಸ್ತಂಭಗಳಾಗಿ ಎಂದು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಪರಿಹಾರ ಕಾರ್ಯಾಚರಣೆಗಳು ಮತ್ತು ಪುನರ್ನಿರ್ಮಾಣ ಪ್ರಯತ್ನಗಳಿಗೆ ಸಹಾಯ ಮಾಡಲು ಸರ್ಕಾರವು ನಿರ್ದಿಷ್ಟವಾಗಿ ವಿತ್ತೀಯ ದೇಣಿಗೆಗಳನ್ನು ಹುಡುಕುತ್ತಿದೆ ಎಂದು ಅವರು ಹೇಳಿದ್ದಾರೆ.