ಕೇರಳ ಭೂಕುಸಿತ: ಸಾವಿನ ಸಂಖ್ಯೆ 158ಕ್ಕೆ ಏರಿಕೆ, ನಾಳೆ ವಯನಾಡಿಗೆ ಸಿಎಂ ವಿಜಯನ್ ಭೇಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜುಲೈ 30 ರಂದು ಭೂಕುಸಿತದಿಂದ ಹಾನಿಗೊಳಗಾದ ವಯನಾಡ್ ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಾಚರಣೆಗಳ ಪರಿಶೀಲನೆಗಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ಬೆಳಿಗ್ಗೆ ಸಭೆ ನಡೆಸಿದರು.

ನಿರಂತರ ಮಳೆಯ ನಂತರ ಮಂಗಳವಾರ ವಯನಾಡು ಜಿಲ್ಲೆಯ ಮೆಪ್ಪಾಡಿಯ ಗುಡ್ಡಗಾಡು ಪ್ರದೇಶಗಳಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 158 ಕ್ಕೆ ಏರಿದೆ ಎಂದು ಕೇರಳ ಕಂದಾಯ ಇಲಾಖೆ ಇಂದು ತಿಳಿಸಿದೆ.

ತಿರುವನಂತಪುರಂನಲ್ಲಿರುವ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಚೇರಿಯಲ್ಲಿ ಮುಖ್ಯಮಂತ್ರಿ ವಿಜಯನ್ ಅವರು ರಕ್ಷಣಾ ಕಾರ್ಯಗಳ ಅವಲೋಕನಕ್ಕಾಗಿ ಸಭೆ ನಡೆಸಿದರು.

ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ನಾಳೆ ಕರೆದಿರುವ ರಾಜ್ಯ ಮಟ್ಟದ ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿಗಳು ಆಗಸ್ಟ್ 1 ರಂದು ಬೆಳಗ್ಗೆ ವಯನಾಡ್ ತಲುಪಲಿದ್ದಾರೆ.

ಇಂದು ಬೆಳಗ್ಗೆ ಕೇಂದ್ರ ಸಚಿವ ಜಾರ್ಜ್ ಕುರಿಯನ್ ಅವರು ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು ಮತ್ತು ಪರಿಹಾರ ಶಿಬಿರಗಳಲ್ಲಿ ಬದುಕುಳಿದವರನ್ನು ಭೇಟಿ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!