ನನ್ನನ್ನು ಜೈಲಿಗೆ ಕಳಿಸೋಕೆ ಪ್ಲಾನ್, ವಿಜಯೇಂದ್ರಗೆ ತಾಕತ್ ಇದ್ರೆ ದಾಖಲೆ ಕೊಡಲಿ: ಡಿ.ಕೆ.ಶಿವಕುಮಾರ್‌ ಸವಾಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನನ್ನನ್ನು ಜೈಲಿಗೆ ಹಾಕಿಸಬೇಕು ಅಂತಾ ಸಂಚು ನಡೆಯುತ್ತಿದೆ, ವಿಜಯೇಂದ್ರ ಗಂಡಸಾಗಿದ್ದರೆ ದಾಖಲೆ ಕೊಡಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಸವಾಲು ಹಾಕಿದ್ದಾರೆ.

ಡಿಕೆಶಿ ಭ್ರಷ್ಟಾಚಾರದ ಪಿತಾಮಹ ಎಂಬ ವಿಜಯೇಂದ್ರ ಹೇಳಿಕೆಗೆ ಬಿಡದಿಯಲ್ಲಿ ಡಿಸಿಎಂ ಡಿ.ಕೆ‌.ಶಿವಕುಮಾರ್ ತಿರುಗೇಟು ನೀಡಿದ್ದು, ಬಿಜೆಪಿ ಸರ್ಕಾರದಲ್ಲಿ ಮಾಡಿದ ಹಗರಣಕ್ಕೆ ಜವಾಬ್ದಾರಿ ಯಾರು? ಯಾರು ಸಿಎಂ ಆಗಿದ್ರು, ಯಾವ ಬ್ಯಾಂಕ್‌ಗೆ ಹಣ ಹೋಗಿದೆ ಎಂಬ ಬಗ್ಗೆ ಮಾಹಿತಿ ಕೊಡಬೇಕು. ಪಾದಯಾತ್ರೆಯಲ್ಲಿ ನಾವು ಪ್ರಶ್ನೆ ಕೇಳ್ತಿದ್ದಕ್ಕೆ ಅವ್ರು ಉತ್ತರ ಕೊಡಬೇಕು. ನಮ್ಮನ್ನ ಜೈಲಿಗೆ ಹಾಕಿಸಬೇಕು ಅಂತಾ ಸಂಚು ನಡೆಯುತ್ತಿದೆ. ನಾನು ಜೈಲಿಗೆ ಹೋಗೋಕು ರೆಡಿ ಇದ್ದೀನಿ ಎಂದು ತಿಳಿಸಿದ್ದಾರೆ.

ವಿಜಯೇಂದ್ರನ ವಿರುದ್ಧ ಎಲ್ಲಾ ಆರೋಪಗಳನ್ನ ಬಿಚ್ಚಿ ಹೇಳುತ್ತೇನೆ. ಭ್ರಷ್ಟಾಚಾರದ ಪಿತಾಮಹ ಅಂದ್ರೆ ಏನು ಅಂತಾ ಹೇಳಬೇಕು. ವಿಜಯೇಂದ್ರಗೆ ತಾಕತ್ ಇದ್ರೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಕೊಡಲಿ. ಗಂಡಸಾಗಿದ್ರೆ ಅವನು ಹೇಳಲಿ, ಅವನಿಗೆ ನಾನು ಗೌರವ ಕೊಡುತ್ತೇನೆ. ಅವನನ್ನ ಪಾರ್ಟಿ ಅಧ್ಯಕ್ಷ ಅಂತಾ ಒಪ್ಪಿಕೊಳ್ಳುತ್ತೇನೆ ಎಂದು ಸವಾಲು ಹಾಕಿದ್ದಾರೆ.

ಯಾವ ಭ್ರಷ್ಟಾಚಾರ, ಏನ್ ತನಿಖೆಯಾಗಿದೆ, ಯಾವಾಗ ಆಗಿದೆ ಎಂಬುದನ್ನ ಹೇಳಬೇಕು. ನಾನು ಇಡಿ ಕೇಸ್‌ನಲ್ಲಿ ಜೈಲಿಗೆ ಹೋಗಿದ್ದೆ‌. ಆಗ ನಿಮ್ಮಪ್ಪ ಇನ್ಕಮ್ ಟ್ಯಾಕ್ಸ್‌ಗೆ ಕೊಟ್ಟಿದ್ರಲ್ಲ ಏನ್ ಅಂತಾ ಗೊತ್ತಾ? ಸುಪ್ರೀಂ ಕೋರ್ಟ್‌ನಲ್ಲಿ ಇಡಿ ಕೇಸ್ ವಜಾ ಆಗಿದ್ದು ಗೊತ್ತಾ? ಇದಕ್ಕೆಲ್ಲ ಉತ್ತರ ಕೊಡುತ್ತೇನೆ ಸಮಯ ಬರಲಿ ಎಂದು ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!