ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್ ನ ಚಂಡೀಗಢ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿಯೇ ಶೂಟೌಟ್ ನಡೆದಿದ್ದು, ಮಾಜಿ ಎಐಜಿಯೊಬ್ಬರು ತನ್ನ ಅಳಿಯನನ್ನೇ ಗುಂಡಿಟ್ಟು ಹತ್ಯೆಗೈದಿರುವ ಘಟನೆ ನಡೆದಿದೆ.
ಪಂಜಾಬ್ ಪೊಲೀಸ್ ನ ಮಾಜಿ ಎಐಜಿ ಮಲ್ವಿಂದರ್ ಸಿಂಗ್ ಸಿಧು,IRS ಅಧಿಕಾರಿಯಾಗಿದ್ದ ತನ್ನ ಅಳಿಯನ ಮೇಲೆ ಗುಂಡಿನ ದಾಳಿ ನಡೆಸಿ, ಕೋರ್ಟ್ ಆವರಣದಲ್ಲಿಯೇ ಹತ್ಯೆಗೈದಿದ್ದಾರೆ.
ಕೌಟುಂಬಿಕ ಕಲಹವೇ ಕೃತ್ಯಕ್ಕೆ ಕಾರಣ ಎನ್ನಲಾಗಿದೆ.
ಮಾಜಿ ಎಐಜಿ ಮಲ್ವಿಂದರ್ ಸಿಂಗ್ ಹಾಗೂ ಕೃಷಿ ಇಲಾಖೆಯಲ್ಲಿ ಐಆರ್ ಎಸ್ ಅಧಿಕಾರಿಯಾಗಿದ್ದ ಅಳಿಯನ ಕುಟುಂಬದ ನಡುವೆ ಕಲಹವೇರ್ಪಟ್ಟಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಎರಡೂ ಕುಟುಂಬದ ಕಡೆಯವರು ಇಂದು ಚಂಡೀಗಢ ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಕೋರ್ಟ್ ಗೆ ಹಾಜರಾಗಿದ್ದ ವೇಳೆಯೇ ಮಲ್ವಿಂದರ್ ಸಿಂಗ್, ಅಳಿಯನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಆರೋಪಿ ಮಾಜಿ ಎಐಜಿ ಮಲ್ವಿಂದರ್ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.