ತುಂಗಭದ್ರಾ ಜಲಾಶಯದಲ್ಲಿ ಮುರಿದಿದ್ದ ಎಲ್ಲಾ 5 ಸ್ಟಾಪ್ ಲಾಗ್ ಅಳವಡಿಕೆ ಯಶಸ್ವಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತುಂಗಭದ್ರಾ ಜಲಾಶಯದಲ್ಲಿ ಒಡೆದಿರುವ 19ನೇ ಗೇಟ್‌ನಲ್ಲಿ ಎಲ್ಲಾ ಐದು ಸ್ಟಾಪ್ ಲಾಗ್ ಅಳವಡಿಸುವ ಕಾರ್ಯ ಯಶಸ್ವಿಯಾಗಿದೆ. ತಜ್ಞರ ಗುಂಪು ಹರಿಯುವ ನೀರನ್ನು ಸಂಪೂರ್ಣವಾಗಿ ನಿಲ್ಲಿಸುವಲ್ಲಿ ಯಶಸ್ವಿಯಾಯಿತು. ಅಣೆಕಟ್ಟು ತಜ್ಞ ಕನ್ನಯ್ಯ ನಾಯ್ಡು ಅವರ ತಂಡ ಮೂರು ದಿನಗಳ ಕಾಲ ಅಣೆಕಟ್ಟಿನ ಗೇಟ್‌ಗಳ ಅಳವಡಿಕೆಯಲ್ಲಿ ತೊಡಗಿತ್ತು.

ಅ.16ರಂದು ಮೊದಲ ಎಲಿಮೆಂಟ್ ಅಳವಡಿಸಲಾಗಿತ್ತು. ಇದೀಗ ಶನಿವಾರ ಸಂಜೆ ಸ್ಟಾಪ್ ಲಾಗ್ ಅಳವಡಿಸಿದ್ದರಿಂದ ಅಣೆಕಟ್ಟೆಯಿಂದ ನೀರು ಹರಿದು ಬರುವುದನ್ನು ನಿಲ್ಲಿಸಲಾಗಿದೆ. ಪ್ರಸ್ತುತ ಜಲಾಶಯದ ಎಲ್ಲಾ 33 ಗೇಟ್‌ಗಳನ್ನು ಮುಚ್ಚಲಾಗಿದೆ ಎಂದು ಟಿಬಿ ಅಣೆಕಟ್ಟು ಮಂಡಳಿ ತಿಳಿಸಿದೆ.

ಸ್ಟಾಪ್ ಲಾಗ್ ಅನ್ನು ಸ್ಥಾಪಿಸುವುದರಿಂದ 70 ಟಿಎಂಎಸ್ ನೀರನ್ನು ಉಳಿಸಲಾಗಿದೆ. ಈ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಒಳಹರಿವು ಹೆಚ್ಚಾಗಿದ್ದು, ಈ ಹಿಂದೆ ಖಾಲಿಯಾಗಿದ್ದ ನೀರು ಮರುಪೂರಣವಾಗುವ ವಿಶ್ವಾಸವಿದೆ. ಸದ್ಯ ಜಲಾಶಯಕ್ಕೆ 41 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!