January16, 2026
Friday, January 16, 2026
spot_img

ರಾಯಚೂರು । ರಸ್ತೆ ದಾಟುತ್ತಿದ್ದಾಗ ಕ್ರೇನ್ ವಾಹನ ಹರಿದು ಮಹಿಳೆ ಸಾವು

ಹೊಸ ದಿಗಂತ ವರದಿ, ರಾಯಚೂರು :

ಕ್ರೇನ್ ವಾಹನ ಹರಿದು ಸ್ಥಳದಲ್ಲಿಯೇ ಮಹಿಳೆಯೋರ್ವರು ಸಾವನ್ನಪ್ಪಿದ ಘಟನೆ ನಗರದ ರೈಲ್ವೆ ನಿಲ್ದಾಣ ಕ್ರಾಸ್ ಬಳಿ ಶುಕ್ರವಾರ ನಡೆದಿದೆ.

ನಗರದ ಸತ್ಯಸಾಯಿ ನಗರ ವಾಸಿಯಾಗಿರುವ ವಿಕಲಚೇತನೆ ಆಗಿದ್ದ ಈರಮ್ಮ ಎಂದು ಗುರುತಿಸಲಾಗಿದೆ. ಈರಮ್ಮ ಹಾಗೂ ಇವರ ತಾಯಿ ರಸ್ತೆ ದಾಟುತ್ತಿದ್ದರು. ಈ ಸಂದರ್ಭದಲ್ಲಿ ತಾಯಿ ರಸ್ತೆ ದಾಟಿದ್ದಾರೆ. ಈರಮ್ಮ ವಿಕಲಚೇತನೆ ಆಗಿದ್ದರಿಂದ ಮೆಲ್ಲಗೆ ರಸ್ತೆ ದಾಡುತ್ತಿರುವ ಸಂದರ್ಭದಲ್ಲಿ ಕ್ರೇನ್ ವಾಹನ ಇವರ ಮೇಲೆ ಹರಿದು ಪರಿಣಾಮ ತ್ರೀವವಾಗಿ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಪ್ರಕರಣ ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ತನಿಖೆ ಮುಂದುವರೆದಿದೆ.

Must Read

error: Content is protected !!