ಹೊಸದಿಗಂತ ಡಿಜಿಟಲ್ ಡೆಸ್ಕ್:
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮುನಿರತ್ನಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.
ವಿಶೇಷ ಜನತಾ ನ್ಯಾಯಾಲಯ ಇಂದು (ಅಕ್ಟೋಬರ್ 5) ಮುನಿರತ್ನ ಅವರನ್ನು 14 ದಿನಗಳ ಕಾಲ (ಅಕ್ಟೋಬರ್ 19 ರವರೆಗೆ) ಕಸ್ಟಡಿಗೆ ನೀಡುವಂತೆ ಆದೇಶ ನೀಡಿದ್ದು, ಎಸ್ಐಟಿಯ ಬಂಧನ ಅವಧಿ ಮುಕ್ತಾಯವಾಗಿದೆ.
ಮುನಿರತ್ನ ಅವರ ಎಸ್ಐಟಿ ಬಂಧನ ಇಂದಿಗೆ ಅಂತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳು ಮಣಿರತ್ನ ಅವರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿ ವಿಶೇಷ ಜನತಾ ನ್ಯಾಯಾಲಯಕ್ಕೆ ಒಪ್ಪಿಸಿದ್ದು, 14 ದಿನಗಳ ಕಾಲ ಬಂಧನದಲ್ಲಿರುವಂತೆ ನ್ಯಾಯಾಲಯ ಆದೇಶಿಸಿದೆ.