ನಿಮ್ಮ ಅಪ್ಪನಾಣೆಗೆ ಸಾಧ್ಯವಿಲ್ಲ: ವಾರದ ಕಥೆಯಲ್ಲಿ ಜಗದೀಶ್ ಮೈಚಳಿ ಬಿಡಿಸಿದ ಕಿಚ್ಚ ಸುದೀಪ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡದ ಬಿಗ್​ಬಾಸ್​ ಸೀಸನ್​ 11ರ ಸಖತ್​ ಜೋರಾಗಿ ಸೌಂಡ್ ಮಾಡುತ್ತಿದೆ. ಇಂದಿನ ವಾರದ ಕಥೆಯಲ್ಲಿ ಕಿಚ್ಚ ಸುದೀಪ್ ಸಖತ್​ ಸೌಂಡ್ ಮಾಡುತ್ತಿದ್ದ ಲಾಯರ್​ ಜಗದೀಶ್​ ಮೈಚಳಿ ಬಿಡಿಸಿದ್ದಾರೆ​.

ಮೊನ್ನೆ ಪ್ರಸಾರವಾದ ಸಂಚಿಕೆಯಲ್ಲಿ ಲಾಯರ್ ಜಗದೀಶ್ ಅಕ್ಷರಶಃ ಕೆಂಡಕಾರಿದ್ದರು. ನಮ್ಮನ್ನ ಎದುರು ಹಾಕ್ಕೊಂಡು ಕರ್ನಾಟಕದಲ್ಲಿ ಬಿಗ್​ಬಾಸ್ ರನ್ ಮಾಡ್ತೀರಾ ಎಂದು ಗದರಿದ್ದರು. ಅಲ್ಲದೇ ನನಗೆ ಇಲ್ಲಿ ಇರೋಕೆ ಇಷ್ಟ ಇಲ್ಲ. ಇಲ್ಲಿಂದ ಹೊರ ಹೋಗುತ್ತೇನೆ. ನಾ ಮನಸು ಮಾಡಿದರೆ ಹೆಲಿಕಾಪ್ಟರ್ ಇಲ್ಲಿಗೆ ತರಿಸುತ್ತೇನೆ. ಆ ಕೆಪಾಸಿಟಿ ನನ್ನಲ್ಲಿದೆ. ಒಳಗಡೆ ಏನೇನೂ ಮಾಫಿಗಳು ನಡೆಸುತ್ತೀರಾ ಅದೆಲ್ಲ ಎಕ್ಸ್​ಪೋಸ್ ಆಗುತ್ತೆ. ನಾನು ಸರ್ಕಾರಕ್ಕೆ ಇದನ್ನೆಲ್ಲ ಹೇಳುತ್ತೇನೆ ಎಂದಿದ್ದರು.

https://x.com/ColorsKannada/status/1842534480831201532?ref_src=twsrc%5Egoogle%7Ctwcamp%5Eserp%7Ctwgr%5Etweet

ಇದೀಗ ವಾರದ ಕಥೆ ಕಿಚ್ಚ ಸುದೀಪನ ಜೊತೆ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್​ ಅವರು ನಗು ನಗುತ್ತಲೇ ಕ್ರಿಮಿನಲ್​ ಲಾಯರ್​ಗೆ ಟಾಂಗ್ ಕೊಟ್ಟಿದ್ದಾರೆ. ಈ ಶೋ ಖಂಡಿತವಾಗಿಯೂ ಚೆನ್ನಾಗಿ ನಡೆಯುತ್ತಿದೆ. ಇಲ್ಲ ಅಂದ್ರೆ 11ನೇ ಸೀಸನ್​ ತನಕ ಬಾರ್ತಾನೆ ಇರಲಿಲ್ಲ. ಕ್ಯಾಮೆರಾ ಮುಂದೆ ಚಾಲೇಂಜ್​ ಮಾಡಿದ್ರಿ ಅಲ್ವಾ ಅದು ತಪ್ಪೇ ಅಲ್ಲ ಸರ್, ಅದು ಜೋಕ್​ ಅಷ್ಟೇ ಅಂತ ತಳ್ಳಿ ಹಾಕಿದ್ದಾರೆ. ಈ ಶೋವನ್ನು ಹಾಳು ಮಾಡೋದಕ್ಕೆ ನಿಮ್ಮ ಅಪ್ಪನಾಣೆಗೆ ಸಾಧ್ಯವಿಲ್ಲ ಅಂತ ಕಿಚ್ಚ ಖಡಕ್​ ಆಗಿ ಹೇಳಿದ್ದಾರೆ. ಇದೇ ಮಾತನ್ನು ಕೇಳಿದ ಲಾಯರ್ ಜಗದೀಶ್​ ಸೈಲೆಂಟ್​ ಆಗಿ ಕುಳಿತುಕೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!