ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ಬಿಗ್ಬಾಸ್ ಸೀಸನ್ 11ರ ಸಖತ್ ಜೋರಾಗಿ ಸೌಂಡ್ ಮಾಡುತ್ತಿದೆ. ಇಂದಿನ ವಾರದ ಕಥೆಯಲ್ಲಿ ಕಿಚ್ಚ ಸುದೀಪ್ ಸಖತ್ ಸೌಂಡ್ ಮಾಡುತ್ತಿದ್ದ ಲಾಯರ್ ಜಗದೀಶ್ ಮೈಚಳಿ ಬಿಡಿಸಿದ್ದಾರೆ.
ಮೊನ್ನೆ ಪ್ರಸಾರವಾದ ಸಂಚಿಕೆಯಲ್ಲಿ ಲಾಯರ್ ಜಗದೀಶ್ ಅಕ್ಷರಶಃ ಕೆಂಡಕಾರಿದ್ದರು. ನಮ್ಮನ್ನ ಎದುರು ಹಾಕ್ಕೊಂಡು ಕರ್ನಾಟಕದಲ್ಲಿ ಬಿಗ್ಬಾಸ್ ರನ್ ಮಾಡ್ತೀರಾ ಎಂದು ಗದರಿದ್ದರು. ಅಲ್ಲದೇ ನನಗೆ ಇಲ್ಲಿ ಇರೋಕೆ ಇಷ್ಟ ಇಲ್ಲ. ಇಲ್ಲಿಂದ ಹೊರ ಹೋಗುತ್ತೇನೆ. ನಾ ಮನಸು ಮಾಡಿದರೆ ಹೆಲಿಕಾಪ್ಟರ್ ಇಲ್ಲಿಗೆ ತರಿಸುತ್ತೇನೆ. ಆ ಕೆಪಾಸಿಟಿ ನನ್ನಲ್ಲಿದೆ. ಒಳಗಡೆ ಏನೇನೂ ಮಾಫಿಗಳು ನಡೆಸುತ್ತೀರಾ ಅದೆಲ್ಲ ಎಕ್ಸ್ಪೋಸ್ ಆಗುತ್ತೆ. ನಾನು ಸರ್ಕಾರಕ್ಕೆ ಇದನ್ನೆಲ್ಲ ಹೇಳುತ್ತೇನೆ ಎಂದಿದ್ದರು.
ಇದೀಗ ವಾರದ ಕಥೆ ಕಿಚ್ಚ ಸುದೀಪನ ಜೊತೆ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರು ನಗು ನಗುತ್ತಲೇ ಕ್ರಿಮಿನಲ್ ಲಾಯರ್ಗೆ ಟಾಂಗ್ ಕೊಟ್ಟಿದ್ದಾರೆ. ಈ ಶೋ ಖಂಡಿತವಾಗಿಯೂ ಚೆನ್ನಾಗಿ ನಡೆಯುತ್ತಿದೆ. ಇಲ್ಲ ಅಂದ್ರೆ 11ನೇ ಸೀಸನ್ ತನಕ ಬಾರ್ತಾನೆ ಇರಲಿಲ್ಲ. ಕ್ಯಾಮೆರಾ ಮುಂದೆ ಚಾಲೇಂಜ್ ಮಾಡಿದ್ರಿ ಅಲ್ವಾ ಅದು ತಪ್ಪೇ ಅಲ್ಲ ಸರ್, ಅದು ಜೋಕ್ ಅಷ್ಟೇ ಅಂತ ತಳ್ಳಿ ಹಾಕಿದ್ದಾರೆ. ಈ ಶೋವನ್ನು ಹಾಳು ಮಾಡೋದಕ್ಕೆ ನಿಮ್ಮ ಅಪ್ಪನಾಣೆಗೆ ಸಾಧ್ಯವಿಲ್ಲ ಅಂತ ಕಿಚ್ಚ ಖಡಕ್ ಆಗಿ ಹೇಳಿದ್ದಾರೆ. ಇದೇ ಮಾತನ್ನು ಕೇಳಿದ ಲಾಯರ್ ಜಗದೀಶ್ ಸೈಲೆಂಟ್ ಆಗಿ ಕುಳಿತುಕೊಂಡಿದ್ದರು.