ವಾಲ್ಮೀಕಿ ಹಗರಣದ ಹಣ ಎಲ್ಲಿಗೆ ಹೋಯ್ತು? ಸ್ಫೋಟಕ ಮಾಹಿತಿ ಕೊಟ್ಟ ಇಡಿ ಅಧಿಕಾರಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ವಾಲ್ಮೀಕಿ ಹಗರಣದ 8ನೇ ಆರೋಪಿ ಮಾಜಿ ಸಚಿವ ಬಿ.ನಾಗೇಂದ್ರ ಅವರ ಆಪ್ತ ಸಹಾಯಕ ವಿಜಯ್ ಕುಮಾರ್ ಗೌಡ ಅವರ ಮೊಬೈಲ್ ಫೋನ್ ಸ್ಕ್ರೀನ್ ಶಾಟ್ ಮತ್ತು ಹಲವು ಸಂಭಾಷಣೆಗಳು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣವನ್ನು ಬಳ್ಳಾರಿ ಲೋಕಸಭೆ ಚುನಾವಣೆಗೆ ಬಳಸಲಾಗಿದೆ ಎಂದು ಸ್ಪಷ್ಟವಾಗಿ ತಿಳಿಸುತ್ತದೆ ಎಂದು ಇಡಿ ಹೇಳಿಕೊಂಡಿದೆ.

ವಿಜಯ್ ಕುಮಾರ್ ಗೌಡರ ಹೇಳಿಕೆಯನ್ನು ಉಲ್ಲೇಖಿಸಿದ ಇಡಿ, ನಾಗೇಂದ್ರ ಅವರ ಜಾಮೀನು ಅರ್ಜಿಗೆ ತನ್ನ ಆಕ್ಷೇಪಣೆ ವ್ಯಕ್ತ ಪಡಿಸಿದೆ, ಹಣವನ್ನು ವರ್ಗಾಯಿಸಲು ಅಧಿಕಾರಿಗಳ ಮೇಲೆ ಒತ್ತಡ ಹೇರುವ ಮೂಲಕ ಮೋಸದ ಚಟುವಟಿಕೆಗಳನ್ನು ರೂಪಿಸುವಲ್ಲಿ ನಾಗೇಂದ್ರ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಪ್ರತಿಪಾದಿಸಿದೆ.

ಹಗರಣದ ಹಣವನ್ನು ಅವರು ಚುನಾವಣಾ ಸಮಯದಲ್ಲಿ ನಗದು ನಿರ್ವಹಣೆ ಸೇರಿದಂತೆ ವೈಯಕ್ತಿಕ ಮತ್ತು ಚುನಾವಣಾ ವೆಚ್ಚಗಳಿಗೆ ಬಳಸುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಹಣವನ್ನು ನಿಭಾಯಿಸುವಲ್ಲಿ ವಿಜಯ್ ಕಮಾರ್ ಗೌಡ ತೊಡಗಿಸಿಕೊಂಡಿದ್ದು, ನೆಕ್ಕುಂಟಿ ನಾಗರಾಜ್ (ಏ-6) ಅವರ ಸೂಚನೆ ಮೇರೆಗೆ ಎಡರು ರುದ್ರಯ್ಯ (ಏ-25) ವಿಜಯ್ ಕುಮಾರ್ ಗೌಡಗೆ ನೀಡಲು 61 ಕೋಟಿ ರೂ.ಗಳನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ನಾಗೇಂದ್ರ ಅವರ ನೇತೃತ್ವದ ಬುಡಕಟ್ಟು ಕಲ್ಯಾಣ ಇಲಾಖೆಯು ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಮೊದಲು ಹಣವನ್ನು ತ್ವರಿತವಾಗಿ ವಿತರಿಸಲು ಕಾರ್ಯವಿಧಾನದ ಪರಿಶೀಲನೆಗಳನ್ನು ಮಾಡಿದೆ ಎಂದು ಇಡಿ ಹೇಳಿದೆ. ಅನುದಾನದ ಹಣ ವಿತರಿಸಲು ಮಧ್ಯ ವರ್ಷದ ಬಳಕೆಯನ್ನು ಮೇಲ್ವಿಚಾರಣೆ ಮಾಡಲು ಇಲಾಖೆ ವಿಫಲವಾಗಿದೆ ಎಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!