ರೋಡ್‌ ರೇಜ್‌ಗೆ ಬೆಚ್ಚಿಬಿದ್ದ ಸಿಟಿ ಮಂದಿ: ದಂಪತಿಗಳಿದ್ದ ಕಾರಿಗೆ ಕಲ್ಲು ತೂರಿ ದಾಂಧಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನಲ್ಲಿ ಪುಂಡರ ಹಿಂಸಾಚಾರ ಮುಂದುವರಿದಿದ್ದು, ದಂಪತಿ ಕಾರಿಗೆ ಕಲ್ಲು ತೂರಿರುವ ಘಟನೆ ಬೆಳಕಿಗೆ ಬಂದಿದೆ.

ಕಳೆದ ರಾತ್ರಿ ದಂಪತಿ 6 ಮತ್ತು 11 ವರ್ಷದ ಇಬ್ಬರು ಮಕ್ಕಳೊಂದಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದ್ದು, ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಕಾರಿನ ಗ್ಲಾಸ್ ಇಳಿಸುವಂತೆ ಅವಾಜ್ ಹಾಕಿದ್ದಾರೆ. ಇದರಿಂದ ಹೆದರಿದ ಅನೂಪ್ ಮತ್ತು ಆತನ ಪತ್ನಿ ಮುಂಭಾಗದ ಕಿಟಕಿ ತೆರೆಯದೆ ತೆರಳಿದ್ದಾರೆ.

ನಂತರ ಕಾರನ್ನು ಹಿಂಬಾಲಿಸಿದ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಕಾರಿನಲ್ಲಿ ಕುಳಿತಿದ್ದ 5 ವರ್ಷದ ಬಾಲಕನ ತಲೆಗೆ ಗಂಭೀರ ಗಾಯಗಳಾಗಿವೆ. ಇಬ್ಬರು ದ್ವಿಚಕ್ರವಾಹನದ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here