ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಬಗ್ಗೆ ಸಿ.ಟಿ. ರವಿ ಅವರು ‘ಆ’ ಮಾತು ಹೇಳಿದ್ದು ಸತ್ಯ. ಅದಕ್ಕೆ ನಾನೇ ಸಾಕ್ಷಿ ಎಂದು ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಆ ಪದವನ್ನು ಬಳಸಿಯೇ ಇಲ್ಲ ಎಂದು ರವಿ ಹೇಳುತ್ತಿದ್ದಾರೆ. ಅವರು ಬಳಸಿದ್ದು ಫ್ರಸ್ಟ್ರೇಟ್ ಎಂಬ ಪದವಲ್ಲ. ಅವರು ಬಳಸಿದ್ದು ಅಶ್ಲೀಲ ಪದ. ಅದಕ್ಕೆ ನಾನೇ ಸಾಕ್ಷಿ ಎಂದು ಹೇಳಿದರು.
ಸಚಿವೆಗೆ ಅಶ್ಲೀಲ ಪದ ಬಳಸಿದ್ದನ್ನು ಕೇಳಿಸಿಕೊಂಡು ಒಂದು ಕ್ಷಣ ನಾನೇ ಗಾಬರಿಯಾದೆ. ಏನಿದು, ಇಂಥ ಪದಗಳನ್ನು ಬಳಸುತ್ತಿದ್ದಾರಲ್ಲಾ ಎಂದುಕೊಂಡೆ. ಇದೀಗ ಅನುಕಂಪ ಗಿಟ್ಟಿಸಿಕೊಳ್ಳಲು ನಾಟಕ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಮಾನ– ಮರ್ಯಾದೆ ಏನಿಲ್ಲ. ಹೀಗಾಗಿ, ಅವರು ರವಿ ಪರ ನಿಂತಿದ್ದಾರೆಂದು ಕಿಡಿಕಾರಿದರು.
ರವಿ ಎನ್ಕೌಂಟರ್ಗೆ ಪೊಲೀಸರು ಯತ್ನಿಸಿದರು, ಕೊಲೆಗೆ ಯತ್ನ ನಡೆದಿತ್ತು ಎಂಬುದೆಲ್ಲಾ ಶುದ್ಧ ನಾಟಕ. ಬಿಜೆಪಿಯವರು ಈ ವಿಚಾರದಲ್ಲಿ ನೀಡುತ್ತಿರುವ ಹೇಳಿಕೆಗಳೆಲ್ಲಾ ಕೇವಲ ನಾಟಕ ಎಂದು ಟೀಕಿಸಿದರು.