CCTV ಕ್ಯಾಮೆರಾ ರಿಪೇರಿಗೆ, CM ಪ್ರೋಗ್ರಾಂ ನತ್ತ ಪೊಲೀಸರ ಚಿತ್ತ: ಇದು ಪಕ್ಕಾ ಪ್ಲಾನ್ ಬ್ಯಾಂಕ್ ದರೋಡೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ಬೀದರ್​​ನಲ್ಲಿ ಎಂಟಿಎಂಗೆ ಹಣ ತುಂಬಿಸೋ ಸಂದರ್ಭದಲ್ಲಿ ಸಿಬ್ಬಂದಿಗೆ ಗುಂಡು ಹಾರಿಸಿ ದರೋಡೆ ಮಾಡಲಾಗಿತ್ತು. ಈ ಬೆನ್ನಲ್ಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಅದು ಮಂಗಳೂರಲ್ಲಿ .

ಥೇಟ್​​ ಸಿನಿಮಾ ಶೈಲಿಯಲ್ಲೇ ಮಂಗಳೂರು ಬ್ಯಾಂಕ್​ನಲ್ಲಿ ದರೋಡೆ ನಡೆದಿದೆ. ಮಂಗಳೂರಿನ ಉಳ್ಳಾಲದ ಕೆಸಿ ರಸ್ತೆಯಲ್ಲಿರೋ ಕೋಟೆಕಾರು ಬ್ಯಾಂಕ್​​ಗೆ ನುಗ್ಗಿ ಹಾಡಹಗಲೇ ದರೋಡೆ ಮಾಡಲಾಗಿದೆ. ಬ್ಯಾಂಕ್​ಗೆ ನುಗ್ಗಿದ ಐದು ಜನರ ಖತರ್ನಾಕ್​​ ಕಳ್ಳರ ಗ್ಯಾಂಗ್​​ ಸಿಬ್ಬಂದಿಗೆ ಬೆದರಿಸಿ ಕೋಟಿಗಟ್ಟಲೇ ಹಣದ ಜೊತೆಗೆ ಚಿನ್ನ ಕದ್ದು ಎಸ್ಕೇಪ್​ ಆಗಿದೆ.

ಸುಮಾರು 12 ಕೋಟಿ ಹಣದೊಂದಿಗೆ ಚಿನ್ನ ಕದ್ದು ಎಸ್ಕೇಪ್​ ಆದ ಗ್ಯಾಂಗ್​​ ಕನ್ನಡದಲ್ಲೇ ಮಾತಾಡುತ್ತಿದ್ದರು ಎಂದು ತಿಳಿದು ಬಂದಿದೆ. ಫಿಯೆಟ್​ ಕಾರಿನಲ್ಲಿ ಬಂದು ಪಿಸ್ತೂಲು, ತಲವಾರು ತೋರಿಸಿ ಲೂಟಿ ಮಾಡಲಾಗಿದೆ.

ಇಂದು ಸಿಸಿಟಿವಿ ಕ್ಯಾಮೆರಾ ರಿಪೇರಿಗೆ ನೀಡಲಾಗಿತ್ತು. ಅಷ್ಟೇ ಅಲ್ಲ ಶುಕ್ರವಾರ ಮಧ್ಯಾಹ್ನ ಆದ ಕಾರಣ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರು ಮಸೀದಿಗಾಗಿ ತೆರಳುತ್ತಿದ್ದರು. ಮಂಗಳೂರಲ್ಲಿ ಸಿಎಂ ಪ್ರೋಗ್ರಾಮ್​ ಇದ್ದ ಕಾರಣ ಹೆಚ್ಚಿನ ಪೊಲೀಸ್​​ ಭದ್ರತೆ ಕೂಡ ಇತ್ತು. ಇದೇ ಒಳ್ಳೆಯ ಅವಕಾಶ ಎಂದು ಭಾವಿಸಿ ಪಕ್ಕಾ ಪ್ಲಾನ್​ ಮಾಡಿ ಕದಿಯಲಾಗಿದೆ. ಸ್ಥಳೀಯರು ಅನುಮಾನ ವ್ಯಪ್ತಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!