ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಜೆಪಿ ಸರಕಾರ ಅನೇಕ ಬದಲಾವಣೆಯತ್ತ ಒಲವು ತೋರಿದ್ದು, ಇದೀಗ ನವರಾತ್ರಿಯ ಸಮಯದಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚಬೇಕೆಂದು ಬಿಜೆಪಿ ಶಾಸಕರು ಒತ್ತಾಯಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್, ‘ಬಿಜೆಪಿಯವರಿಗೆ ಧೈರ್ಯವಿದ್ದರೆ ಕೆಎಫ್ಸಿ ಮುಚ್ಚಲಿ’ ಎಂದು ಸವಾಲು ಹಾಕಿದ್ದಾರೆ.
ಬಿಜೆಪಿಯವರು ಮಾಂಸ, ಕೋಳಿ ಮತ್ತು ಇತರ ಆಹಾರಗಳನ್ನು ಮಾರಾಟ ಮಾಡುವ ರೆಸ್ಟೋರೆಂಟ್ಗಳನ್ನು ಸಹ ಹೊಂದಿದ್ದಾರೆ . ‘ನೀವು ಅವುಗಳನ್ನು ಮುಚ್ಚುತ್ತೀರಾ? ಬಡವರ ಬಂಡಿಗಳನ್ನು ಮುರಿಯುವುದರಿಂದ ಧೈರ್ಯ ತೋರಿಸುವ ಬದಲು ದೊಡ್ಡ ಕ್ರಮ ಕೈಗೊಳ್ಳಿ’ ಎಂದು ಟೀಕಿಸಿದ್ದಾರೆ.
ಇದೇ ವೇಳೆ ನವರಾತ್ರಿಯಲ್ಲಿ ಮದ್ಯವನ್ನು ಏಕೆ ನಿಷೇಧಿಸಬಾರದು? ದೆಹಲಿ ದೇಶದ ರಾಜಧಾನಿಯಾಗಿದ್ದು, ಇಲ್ಲಿ ವಿಶ್ವದ ವಿವಿಧ ಭಾಗಗಳ ಜನರು, ಎಲ್ಲಾ ವರ್ಗದವರು ಮತ್ತು ವಿವಿಧ ರಾಜ್ಯಗಳ ಪ್ರತಿನಿಧಿಗಳು ವಾಸಿಸುತ್ತಾರೆ ಎಂದು ಅವರು ಸಂಜಯ್ ಸಿಂಗ್ ಹೇಳಿದ್ದಾರೆ.
‘ರಂಜಾನ್ ಮತ್ತು ನವರಾತ್ರಿ ಎರಡೂ ಪವಿತ್ರ ತಿಂಗಳುಗಳು. ಆದ್ದರಿಂದ ನವರಾತ್ರಿಯ ಸಮಯದಲ್ಲಿ ದೆಹಲಿಯಾದ್ಯಂತ ಮದ್ಯದಂಗಡಿಗಳನ್ನು ಮುಚ್ಚಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ವೇಳೆ ‘ಸೌಗತ್-ಎ-ಮೋದಿ’ ಕಿಟ್ ಬಗ್ಗೆ ಮಾತನಾಡಿದ ಸಂಜಯ್ ಸಿಂಗ್, ‘ಯೋಗಿ ಜೀ, ನಡ್ಡಾ ಸಾಹೇಬ್ ಮತ್ತು ಆರ್ಎಸ್ಎಸ್ ಕಾರ್ಯಕರ್ತರು ಈ ಕಿಟ್ಗಳನ್ನು ವಿತರಿಸುತ್ತಾರೆ. ಮೋದಿ ಜೀ ಅವರು ಸೌಗತ್-ಎ-ಮೋದಿಯನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಇದರ ನಡುವೆ ಬಿಜೆಪಿಯವರು ‘ಈ ರೀತಿ ನಮಾಜ್ ಮಾಡಬಾರದು, ಈ ರೀತಿ ಪೂಜೆ ಮಾಡಬಾರದು, ಮಾಂಸದ ಅಂಗಡಿಗಳನ್ನು ಮುಚ್ಚಬೇಕು’ ಎಂದು ಹೇಳುತ್ತಾರೆ’ ಎಂದು ಟೀಕಿಸಿದ್ದಾರೆ.