ಶ್ರೀಲಂಕಾದತ್ತ ಹೊರಟ ಮೋದಿ: ಥೈಲ್ಯಾಂಡ್‌ ಪ್ರಧಾನಿ, ರಾಜ, ರಾಣಿಗೆ ಉಡುಗೊರೆ ನೀಡಿದ ನಮೋ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಥಾಯ್ಲೆಂಡ್‌ ರಾಜಧಾನಿ ಬ್ಯಾಂಕಾಕ್‌ನಲ್ಲಿ ಬಿಮ್‌ಸ್ಟೆಕ್‌ ಶೃಂಗಸಭೆ ಮುಗಿಸಿ ಪ್ರಧಾನಿ ಮೋದಿ ಅವರು ಶ್ರೀಲಂಕಾಗೆ ತೆರಳಿದ್ದಾರೆ.

ಈ ವೇಳೆ ಪ್ರಧಾನಿ ಮೋದಿ ಮತ್ತು ಥೈಲ್ಯಾಂಡ್ ಪ್ರಧಾನಿ ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ.

ಭಾರತದ ಕಲೆ, ವಾಸ್ತುಶಿಲ್ಪ ಹಾಗೂ ಸಂಸ್ಕೃತಿಗೆ ಹೆಸರುವಾಸಿ, ಮದ್ವ ಭಿತ್ತಿ ಚಿತ್ರಗಳು, ಮೀನಕರಿ, ಚಿತ್ತಾರ, ಪಿಚ್ವಾಯಿ, ತಂಜೋರ್ ಚಿತ್ರಕಲೆ, ಹಾಗೂ ಮೀನಾಕಾರಿ ಕರಕುಶಲ ಪ್ರಸಿದ್ಧ. ಹೀಗಾಗಿ ದೇಶದ ಪ್ರಮುಖ ರಾಜ್ಯಗಳಲ್ಲಿ ಪ್ರಖ್ಯಾತವಾಗಿರುವ ಶಿಲ್ಪಕಲೆಗಳನ್ನು ಥೈಲಾಂಡ್‌ ಹಾಲಿ ಮತ್ತು ಮಾಜಿ ಪ್ರಧಾನಿಗೆ ವಿಶೇಷ ಉಡುಗೊರೆ ನೀಡಿದ್ದಾರೆ.

Imageಪ್ರಧಾನಿ ನರೇಂದ್ರ ಮೋದಿ ಅವರು ಥೈಲ್ಯಾಂಡ್ ಪ್ರಧಾನಿ ಪೇಟೊಂಗ್‌ಟಾರ್ನ್ ಶಿನವಾತ್ರ ಅವರ ಪತ್ನಿ ಪಿಟಾಕಾ ಸುಕ್ಸಾವತ್ ಅವರಿಗೆ ಸುತ್ತಲು ಸ್ಫಟಿಕದ ಮುತ್ತು ಚಿನ್ನದ ಲೇಪಿತವಿರುವ ಹುಲಿ ಮೋಟಿಫ್ ಕಫ್‌ಲಿಂಕ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಉಡುಗೊರೆ ಗುಜರಾತ್‌ನ ಸಂಪ್ರದಾಯ ಮತ್ತು ಕಲಾತ್ಮಕತೆಯ ಪ್ರತೀಕವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಆಂಧ್ರಪ್ರದೇಶದ ನವಿಲಿನ ದೀಪ ಮತ್ತು ಹಿತ್ತಾಳೆ ಉರ್ಲಿಯನ್ನು ಥೈಲ್ಯಾಂಡ್‌ನ ಮಾಜಿ ಪ್ರಧಾನಿ ಥಾಕ್ಸಿನ್ ಶಿನವಾತ್ರ ಅವರಿಗೆ ಉಡುಗೊರೆಯಾಗಿ ನೀಡಿದರು. ಈ ಉಡುಗೊರೆ ಸಾಂಪ್ರದಾಯಿಕ ಕರಕುಶಲತೆಯ ಮಹತ್ವದ ಪ್ರತೀಕವಾಗಿದ್ದು, ಶುದ್ಧತೆ, ಸಕಾರಾತ್ಮಕತೆ ಮತ್ತು ಸಮೃದ್ಧಿಯನ್ನು ಸಂಕೇತಿಸುತ್ತದೆ.

ಥೈಲ್ಯಾಂಡ್ ರಾಣಿ ರಾಣಿ ಸುಥಿದಾ ಬಜ್ರಸುಧಾಬಿಮಲಲಕ್ಷಣ ಅವರಿಗೆ ಉತ್ತರ ಪ್ರದೇಶದ ಬ್ರೊಕೇಡ್ ರೇಷ್ಮೆ ಶಾಲನ್ನು ಉಡುಗೊರೆಯಾಗಿ ನೀಡಿದರು. ಬ್ರೊಕೇಡ್‌ನಲ್ಲಿ ಹೂವಿನ, ಜ್ಯಾಮಿತೀಯ ಮತ್ತು ಪಾರಂಪರಿಕ ಮೋತಿಫ್‌ಗಳು ಕಾಣಿಸುತ್ತವೆ. ಇವುಗಳಲ್ಲಿ ಮಲ್ಲಿಗೆ ಹೂವು, ಮಯೂರ, ಕಮಲ, ಮತ್ತು ಪಾರಂಪರಿಕ ಪೈಸ್‌ಲಿ ಮಾದರಿಗಳು ಪ್ರಸಿದ್ಧ. ಭಾರತೀಯ ಚಿಕಣಿ ಮತ್ತು ಪಿಚ್ವಾಯಿ ಕಲೆಯಿಂದ ಪ್ರೇರಿತವಾದ ಹಳ್ಳಿಯ ಜೀವನ, ದೈವಿಕ ಆಚರಣೆಗಳು ಮತ್ತು ಪ್ರಕೃತಿಯನ್ನು ಚಿತ್ರಿಸುವ ಸಂಕೀರ್ಣ ಲಕ್ಷಣಗಳನ್ನು ಒಳಗೊಂಡಿದೆ.

ಧ್ಯಾನ್ ಮುದ್ರೆಯಲ್ಲಿರುವ ಸಾರನಾಥ ಬುದ್ಧನ ಪ್ರತಿಮೆಯನ್ನು ಥೈಲ್ಯಾಂಡ್ ರಾಜ ಮಹಾ ವಜಿರಲಾಂಗ್‌ಕಾರ್ನ್ ಫ್ರಾ ವಜಿರಕ್ಲಾಚೊಯುಹುವಾ ಅವರಿಗೆ ಉಡುಗೊರೆಯಾಗಿ ನೀಡಿದರು. ಈ ಪ್ರತಿಮೆಯು ಸಾರನಾಥ ಶೈಲಿಯಿಂದ ಪ್ರೇರಿತವಾದ ಬೌದ್ಧ ಆಧ್ಯಾತ್ಮಿಕತೆ ಮತ್ತು ಭಾರತೀಯ ಕರಕುಶಲತೆಯ ಅದ್ಭುತ ಪ್ರಾತಿನಿಧ್ಯವಾಗಿದೆ. ಬಿಹಾರದಿಂದ ಹುಟ್ಟಿಕೊಂಡ ಈ ಪ್ರತಿಮೆಯು ಗುಪ್ತ ಮತ್ತು ಪಾಲ ಕಲಾ ಸಂಪ್ರದಾಯಗಳನ್ನು ಅದರ ಪ್ರಶಾಂತ ಅಭಿವ್ಯಕ್ತಿ ಪ್ರತಿಬಿಂಬಿಸುತ್ತದೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!