WEATHER | ಇನ್ನೂ ಮುಗಿದಿಲ್ಲ ಮಳೆ ಅಧ್ಯಾಯ, ಏ.13ರವರೆಗೆ ಈ ಜಿಲ್ಲೆಗಳಲ್ಲಿ ವರ್ಷಧಾರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್ 13ರವರೆಗೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಕೊಪ್ಪಳ, ವಿಜಯಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ.

ಕೃಷ್ಣರಾಜಪೇಟೆ, ಆಗುಂಬೆ, ಪುತ್ತೂರು, ಬೆಳ್ತಂಗಡಿ, ಕಮ್ಮರಡಿ, ಕಳಸ, ನಾಪೋಕ್ಲು, ಕಾರ್ಕಳ, ಯಲ್ಲಾಪುರ, ಮಸ್ಕಿ, ಲಿಂಗಸುಗೂರು, ಕಕ್ಕೇರಿ, ಮುದ್ದೇಬಿಹಾಳ, ನಾಗಮಂಗಲ, ಅಜ್ಜಂಪುರ, ಹೊನ್ನಾಳಿ, ಸಿದ್ದಾಪುರ, ಬನವಾಸಿ, ಉಪ್ಪಿನಂಗಡಿ, ಬಬಲೇಶ್ವರ, ಕೂಡಲಸಂಗಮ, ಹುಂಚದಕಟ್ಟೆ, ಎಚ್​ಡಿ ಕೋಟೆ, ಟಿಜಿ ಹಳ್ಳಿಯಲ್ಲಿ ಮಳೆಯಾಗಿದೆ. ಕಲಬುರಗಿಯಲ್ಲಿ 38.6 ಡಿಗ್ರಿ ಸೆಲ್ಸಿಯಸ್ ಅತ್ಯಂತ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!