IPL | ಕೆಕೆಆರ್ ಬೌಲಿಂಗ್ ದಾಳಿಗೆ ಎಡವಿದ ಚೆನ್ನೈ: ಗೆಲುವಿಗೆ 104 ರನ್​ಗಳ ಟಾರ್ಗೆಟ್​

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್​ ಟೂರ್ನಿಯಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ 20 ಓವರ್​ಗಳಲ್ಲಿ 9 ವಿಕೆಟ್​ ಕಳೆದುಕೊಂಡು 103 ರನ್ ​ಗಳ ಗಳಿಸಿದೆ.

ಟಾಸ್ ಗೆದ್ದ ಕೆಕೆಆರ್ ತಂಡದ ನಾಯಕ ಅಜಿಂಕ್ಯಾ ರಹಾನೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಚೆನ್ನೈ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನ ಮಾಡಿದರು.

ಬ್ಯಾಟಿಂಗ್​ಗೆ ಬಂದ ರಚಿನ್ ರವೀಂದ್ರ (4) ಹಾಗೂ ಡಿವೋನ್ ಕಾನ್ವೆ (12) ತಂಡದ ಮೊತ್ತ 16 ರನ್​ ಇರುವಾಗಲೇ ಔಟ್ ಆದರು.
ರಾಹುಲ್ ತ್ರಿಪಾಠಿ 16 ರನ್​ ಗಳಿಸಿ ಆಡುವಾಗ ಸುನಿಲ್ ನರೈನ್​ ಅವರ ಬೌಲಿಂಗ್​ನಲ್ಲಿ ಕ್ಲೀನ್ ಬೋಲ್ಡ್​ ಆದರು. ವಿಜಯ್ ಶಂಕರ್ 2 ಫೋರ್, 1 ಸಿಕ್ಸರ್ ಸಮೇತ 29 ರನ್​ಗಳಿಂದ ಆಡುವಾಗ ವರುಣ್​ ಚಕ್ರವರ್ತಿ ಬ್ರೇಕ್ ಹಾಕಿದರು. ಆರ್ ಅಶ್ವಿನ್ ಅವರು​ ಕೂಡ ಬಂದಷ್ಟೇ ವೇಗವಾಗಿ ಪೆವಿಲಿಯನ್​ಗೆ ನಡೆದರು. ಆಲ್​ರೌಂಡರ್ ಜಡೇಜಾ ಹಾಗೂ ದೀಪಕ್ ಹೂಡಾ ಈ ಇಬ್ಬರು ಡಕೌಟ್ ಆದರು .

ಚೆನ್ನೈ ತಂಡದ ಕ್ಯಾಪ್ಟನ್ ಹಾಗೂ ವಿಕೆಟ್​ ಕೀಪರ್ ಎಂ.ಎಸ್​ ಧೋನಿ ಅವರು 10ನೇ ಬ್ಯಾಟ್ಸ್​ಮನ್​ ಆಗಿ ಕ್ರೀಸ್​ಗೆ ಆಗಮಿಸಿದರು.ಆದ್ರೆ 1 ರನ್​ಗೆ ಹೊರ ನಡೆದು ಫ್ಯಾನ್ಸ್​ಗೆ ನಿರಾಸೆ ಮೂಡಿಸಿದರು. ನೂರ್​ ಅಹ್ಮದ್​ ಕೂಡ 1 ರನ್​ಗೆ ಕ್ಯಾಚ್ ಕೊಟ್ಟರು. ತಂಡದಲ್ಲಿ ಶಿವಂ ದುಬೆ ಅವರ 31 ರನ್​ಗಳನ್ನು ಬಿಟ್ಟರೇ ಉಳಿದ ಯಾವ ಬ್ಯಾಟ್ಸ್​ಮನ್ ಕೂಡ ಈ ರನ್​ಗಳ ಗಡಿ ಸನಿಹಕ್ಕೂ ಬರಲಿಲ್ಲ. ಹೀಗಾಗಿ ಚೆನ್ನೈ ಸೂಪರ್​ ಕಿಂಗ್ಸ್​ ಕೇವಲ 104 ರನ್​ಗಳ ಟಾರ್ಗೆಟ್​ ಅನ್ನು ರಹಾನೆ ಪಡೆಗೆ ನೀಡಿದೆ. ​ ​

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!